ಗೌಡರಿಗೆ ದಕ್ಕುವುದೇ ರಾಮನಗರ ?

ರಾಜ್ಯದಲ್ಲಿ ಉಪಚುನಾವಣೆಗಳ ಕಾವು ದಿನದಿಂದ ದಿನಕ್ಕೆ ಏರತೊಡಗಿದೆ. ಆಡಳಿತ ಪಕ್ಷ ಬಿಜೆಪಿಗೆ ಈ ಸಲವಾದರೂ ಪಾಠ ಕಲಿಸಬೇಕು ಎನ್ನುವ ಉದ್ದೇಶದಿಂದ ಪ್ರತಿಪಕ್ಷಗಳು ಭಾರಿ ತಂತ್ರಗಳನ್ನು ರೂಪಿಸತೊಡಗಿವೆ. ಕಳೆದ ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ತಮ್ಮ ಸಾಮರ್ಥ್ಯ ತೋರಿದ್ದು, ಕಾಂಗ್ರೆಸ್ ಮಾತ್ರ ಬರಿಗೈಯಾಗುವ ಮೂಲಕ ಭಾರಿ ಅವಮಾನಕ್ಕೆ ಈಡಾಯಿತು.

*ಮೃತ್ಯುಂಜಯ ಕಲ್ಮಠ

ಆಗಸ್ಟ್ 18 ರಂದು 5 ಕ್ಷೇತ್ರಗಳಲ್ಲಿ ಮತದಾನದಲ್ಲಿ ನಡೆಯಲಿದೆ. ಗೋವಿಂದರಾಜನಗರ ಕ್ಷೇತ್ರ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಬಾರಿ ಪ್ರತಿಷ್ಠಿತ ಕಣವಾಗಿವೆ. ಆಪರೇಷನ್ ಕಮಲದ ಮೂಲಕ ಬಿಜೆಪಿ ಸೇರಿ ಸಚಿವರಾಗಿರುವ ವಿ ಸೋಮಣ್ಣ ಬಿಜೆಪಿ ಅಭ್ಯರ್ಥಿಯಾಗಿದ್ದರೆ, ಕಾಂಗ್ರೆಸ್ ಪಕ್ಷದ ಕುಬೇರ ಹಾಗೂ ವಿಜಯನಗರ ಕ್ಷೇತ್ರದ ಶಾಸಕ ಲೇಔಟ್ ಕೃಷ್ಣಪ್ಪ ಅವರ ಮಗ ಪ್ರಿಯಕೃಷ್ಣ ಕಾಂಗ್ರೆಸ್ ಅಭ್ಯರ್ಥಿ. ಮೇಲ್ನೋಟಕ್ಕೆ ಸೋಮಣ್ಣ ಗೆಲುವು ಸರಳ ಎಂದು ಹೇಳಲಾಗುತ್ತೆ. ಆದರೆ, ವಾಸ್ತವಾಂಶ ಅವರ ಕಡೆಗೆ ಇಲ್ಲ ಎನ್ನುವ ಸುದ್ದಿಯೂ ದಟ್ಟವಾಗಿದೆ.

ವಿಜಯನಗರ ಶಾಸಕ ಕೃಷ್ಣಪ್ಪ ಅವರು ಕಳೆದೆರಡು ಚುನಾವಣೆಯಲ್ಲಿ ಸೋಮಣ್ಣ ವಿರುದ್ಧ ಸೋತಿದ್ದಾರೆ. ತಾವು ಅನುಭವಿಸಿದ ಸೋಲನ್ನು ತಮ್ಮ ಮಗನ ಗೆಲುವಿನ ಮೂಲಕ ಕಂಡುಕೊಳ್ಳಬೇಕು ಎಂದು ಕನಸು ಕಾಣುತ್ತಿದ್ದಾರೆ. ಇದಕ್ಕೆ ಸಾಕಷ್ಟು ತಂತ್ರಗಳನ್ನು ಹೆಣೆಯತೊಡಗಿದ್ದಾರೆ. ಕೃಷ್ಣಪ್ಪ ದೊಡ್ಡ ರೊಕ್ಕದ ಅಸಾಮಿ. ಎಷ್ಟು ಖರ್ಚಾದರೂ ಪರವಾಗಿಲ್ಲ. ಒಟ್ಟಿನಲ್ಲಿ ಗೆಲುವುಬೇಕು ಎನ್ನುವುದು ಅವರ ಏಕೈಕ ಮಂತ್ರ. ಆದರೆ, ಉತ್ತಮ ಕೆಲಸಗಾರ ಎಂಬ ಹಣೆಪಟ್ಟಿ ಹೊಂದಿರುವ ಸೋಮಣ್ಣ ಅವರ ಮುಂದೆ ರೊಕ್ಕ ಕೆಲಸ ಮಾಡುವ ಸಾಧ್ಯತೆ ಕಡಿಮೆ. ಮೇಲಾಗಿ ಆಡಳಿತ ಪಕ್ಷದ ಸಂಪುಟ ದರ್ಜೆ ಸಚಿವ ಬೇರೆ. ಈ ಎಲ್ಲ ಅಂಶಗಳು ಸೇರಿದರೆ ಸೋಮಣ್ಣ ಗೆಲುವು ನಿರಾಂತಕ ಎನ್ನುವುದರಲ್ಲಿ ಎರಡು ಮಾತಿಲ್ಲ.

ರಾಮನಗರ ಕುರುಕ್ಷೇತ್ರ

ಗೌಡರಿಗೆ ಪ್ರತಿಷ್ಠೆಯ ಕಣವಾಗಿರುವ ರಾಮನಗರ ವಿಧಾನಸಭೆ ಕ್ಷೇತ್ರವನ್ನು ಮತ್ತೆ ಜೆಡಿಎಸ್ ವಶಕ್ಕೆ ತೆಗೆದುಕೊಳ್ಳಬೇಕು ಎಂಬುದು ಆ ಪಕ್ಷದ ವರಿಷ್ಠರ ಮುಂದಿರುವ ದೊಡ್ಡ ಸವಾಲು. ಎಚ್ ಡಿ ರೇವಣ್ಣ ಪತ್ನಿ ಭವಾನಿ ರೇವಣ್ಣ ಸ್ಪರ್ಧಿಸಿದ್ದರೆ, ಗೌಡರ ಕನಸು ಈಡೇರುವುದರಲ್ಲ ಎರಡು ಮಾತಿರಲಿಲ್ಲ. ಕುಟುಂಬ ರಾಜಕಾರಣ ಆರೋಪ ಮತ್ತೊಮ್ಮೆ ಬರಲಿದೆ ಎಂಬ ಭಯದಿಂದ ಅವರ ಕೆ ರಾಜು ಎಂಬುವವರಿಗೆ ಪಕ್ಷದ ಟಿಕೆಟ್ ನೀಡಿದ್ದಾರೆ. ಇದರಿಂದ ಗೌಡರು ಎಡವಿದರೇನೂ ಎಂಬ ಭಾವನೆಯಂತೂ ದಟ್ಟವಾಗಿದೆ.

ರಾಜು ಅವರಿಗೆ ಟಿಕೆಟ್ ನೀಡುವ ಮೂಲಕ ಗೌಡರದು ಕುಟುಂಬ ರಾಜಕಾರಣ ಎಂಬ ಆರೋಪದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಕಳೆದ ಸಲ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವಿರುದ್ಧ ಸೋತಿದ್ದ ಸಿ ಎಂ ಲಿಂಗಪ್ಪ ಮತ್ತೆ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದು, ಅವರೆಡೆಗೆ ಜನರ ಅನುಕಂಪ ಕೆಲಸ ಮಾಡುವ ಸಾಧ್ಯತೆ ಇದೆ. ಉಳಿದಂತೆ ಚಿತ್ತಾಪುರ ಮೀಸಲು, ಕೊಳ್ಳೇಗಾಲದಲ್ಲಿ ಕೈ ಕಮಾಲ್ ಮಾಡಬಹುದು. ಚನ್ನಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಮಾಜಿ ಸಿಪಿ ಯೋಗೀಶ್ವರಗೆ ಜೆಡಿಎಸ್, ಕಾಂಗ್ರೆಸ್ ಭಾರಿ ಪೈಪೋಟಿ ನೀಡಲಿವೆ. ಇಲ್ಲಿ ಮೂರು ಪಕ್ಷಗಳಿಗೂ ಗೆಲುವಿನ ಸಾಧ್ಯತೆ ಇದೆ. ಕೂದಲೆಳೆಯ ಅಂತರದಲ್ಲಿ ಕೈ ವಿಜಯಮಾಲೆ ಧರಿಸಬಹುದು.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+