ರೇವಣ್ಣ ಅಂದ್ರೆ ರಾವಣ : ಸೋಮಶೇಖರರೆಡ್ಡಿ

Somashekar Reddy meets Yeddyurappa
ಬಳ್ಳಾರಿ, ಜು. 31 : ರೇವಣ್ಣ ಅಂದ್ರೆ ರಾವಣ... ! ಹಾಲಿ ಕೆಎಂಎಫ್ ಅಧ್ಯಕ್ಷ ಸೋಮಶೇಖರರೆಡ್ಡಿ ಅವರು ಮಾಜಿ ಕೆಎಂಎಫ್ ಅಧ್ಯಕ್ಷ ಎಚ್ ಡಿ ರೇವಣ್ಣ ಅವರನ್ನು ತರಾಟೆಗೆ ತೆಗೆದುಕೊಂಡ ಪರಿ ಇದು. ಹಾಲು ಒಕ್ಕೂಟಕ್ಕೆ ರೇವಣ್ಣ ಅಧ್ಯಕ್ಷರಾಗಿದ್ದಾಗ ಹೊಲಸು ತುಂಬಿಕೊಂಡಿತ್ತು. ಈ ಹೊಲಸನ್ನು ಸ್ವಚ್ಚಗೊಳಿಸಿ, ಕೆಎಂಎಫ್ ಅಭಿವೃದ್ಧಿ ಪಡಿಸುವುದಾಗಿ ಅವರ ತಿಳಿಸಿದರು.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೆಎಂಎಫ್ ಹಾಲು ದರ ಇಳಿಕೆಗೆ ಒಕ್ಕೂಟ ಚಿಂತನೆ ನಡೆಸಿದೆ ಎಂದರು. ಹಾಲು ಮಾರಾಟ ಮತ್ತು ಉತ್ಪಾದಕರನ್ನು ಗಮನದಲ್ಲಿಟ್ಟುಕೊಂಡು ಜನಸಾಮಾನ್ಯರಿಗೆ ಕೈಗೆಟುಕುವಂತೆ ಹಾಲು ದರ ಪರಿಷ್ಕರಿಸುವ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜೊತೆ ಚರ್ಚಿಸಲಾಗುವುದು ಎಂದು ಹೇಳಿದರು.

ಕೆಎಂಎಫ್ ಗೆ ನಾನೇ ಪೂರ್ಣಾವಧಿ ಅಧ್ಯಕ್ಷ. ಸೂಕ್ತ ಮಾರ್ಗದರ್ಶನ ನೀಡುವ ಉದ್ದೇಶದಿಂದ ಸದಾನಂದಗೌಡರನ್ನು ನಾಮನಿರ್ದೇಶಕರನ್ನಾಗಿ ನೇಮಸಲಾಗಿದೆ ಎಂದು ರೆಡ್ಡಿ ಸ್ಪಷ್ಟಪಡಿಸಿದರು. ಕರ್ನಾಟಕ ಹಾಲು ಒಕ್ಕೂಟವನ್ನು ರಾಷ್ಟ್ರದಲ್ಲೇ ನಂಬರ್ 1 ಮಾಡುವುದಾಗಿ ಸೋಮಶೇಖರರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+