2 ತಿಂಗಳಲ್ಲಿ ಜನರ ಹಣ ಹಿಂದಿರುಗಿಸುವೆ, ಶಾಸ್ತ್ರಿ

ನಾನು ಠೇವಣಿದಾರರಿಗೆ ಮೋಸ ಮಾಡುವ ಉದ್ದೇಶದಿಂದ ಸಂಸ್ಥೆ ಆರಂಭಿಸಲಿಲ್ಲ. ಹಿತಶತ್ರುಗಳಿ೦ದಾಗಿ ನಾನು ಈ ಸ್ಥಿತಿ ತಲುಪಿದ್ದೇನೆ. ಕೊಡಬೇಕಾಗಿರುವ ಹಣವನ್ನು ಎರಡು ತಿಂಗಳಲ್ಲಿ ಹಿಂದಿರುಗಿಸುತ್ತೆಂದು ನ್ಯಾಯಾಲಯಕ್ಕೂ ಮನವರಿಕೆ ಮಾಡಿದ್ದೇನೆ. ನ್ಯಾಯ ಮಾರ್ಗದಲ್ಲೇ ಹಣ ಹಿಂದಿರುಗಿಸುತ್ತೇನೆ. ನನ್ನ ಜೊತೆಯಲ್ಲಿ ಇದ್ದವರೇ ಹೇಗೆ ಮೋಸ ಮಾಡಿದರು ಎಂದು ಸದ್ಯದಲ್ಲೇ ಬಹಿರಂಗಗೊಳಿಸುತ್ತೇನೆ ಎಂದು ಶಾಸ್ತ್ರಿ 'ವಿಜಯಕರ್ನಾಟಕ' ಪತ್ರಿಕೆಗೆ ದೂರವಾಣಿ ಮೂಲಕ ಕರೆಮಾಡಿ ತಿಳಿಸಿದ್ದಾರೆ.
ವಿನಿವಿಂಕ್ ಶಾಸ್ತ್ರಿಗೆ ಸುಪ್ರೀಂಕೋರ್ಟ್ ಷರತ್ತು ಬದ್ದ ಜಾಮೀನು ನೀಡಿತ್ತು. ಸೋಮವಾರ ರಾತ್ರಿ 8 ಘಂಟೆ ಸುಮಾರಿಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಿಡುಗಡೆಗೊಂಡಿದ್ದರು. ನಾಮ ಹಾಕಿಸಿಕೊಂಡವರ ಶಾಪವೋ ಅಥವಾ ಕಾಕತಾಳಿಯವೋ ವಿನಿವಿಂಕ್ ಹಗರಣ ಬಯಲಿಗೆ ಬಂದ ಬಳಿಕ ಶಾಸ್ತ್ರಿ ಮಗ ನಾಗರಾಜ್ ಶಾಸ್ತ್ರಿ ಮಾನಸಿಕ ಸ್ವಾಸ್ಥ್ಯ ಕಳೆದುಕೊಂಡು ನಾಪತ್ತೆಯಾದವನು ಈವರೆಗೂ ಪತ್ತೆಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications