ರೈತರ ಸಂಪೂರ್ಣ ಸಾಲ ಮನ್ನಾ ಮಾಡಿ : ಎಚ್ಡಿಕೆ

ಕೃಷಿ ಮೇಲೆ ನಡೆದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮೀನುಗಾರರು, ನೇಕಾರರು ಮತ್ತು ಗ್ರಾಮೀಣ ಕುಶಲಕರ್ಮಿಗಳೆಲ್ಲರ ಸಾಲಗಳನ್ನು ಮನ್ನಾ ವ್ಯಾಪ್ತಿಗೆ ಒಳಪಡಿಸಬೇಕು. ಯಾವ ಗೊಂದಲಕ್ಕೂ ಅವಕಾಶವಿಲ್ಲದೆ ಹೊಸ ವಿತರಣೆಗೆ ಅನುವು ಮಾಡುವ ನಿಟ್ಟಿನಲ್ಲಿ ನಿರ್ಧಾರ ಮಾಡಬೇಕು ಎಂದರು. ಹಣಕಾಸು ಸಚಿವರು ಬಜೆಟ್ ನಲ್ಲಿ 2,87,000 ಕೋಟಿಗಳಿಂದ 3,25,000 ಕೋಟಿ ರುಪಾಯಿ ಹೆಚ್ಚಿಸಿರುವುದಾಗಿ ಹೇಳಿದ್ದಾರೆ. ಆದರೆ, ರೈತರಿಗೆ ಎಷ್ಟು ವಿತರಿಸಲಾಗಿದೆ ಎಂಬುದನ್ನು ವಿವರಿಸಿಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದರು.
ಬೆಳೆ ವಿಮೆ ಕುರಿತು ಮಾತನಾಡಿದ ಕುಮಾರಸ್ವಾಮಿ, ಸರಕಾರ ಬೆಳೆ ವಿಮೆ ಜಾರಿಗೆ ತಂದಿದೆ. ಆದರೆ, ಇಂದು ಬ್ಯಾಂಕುಗಳಿಂದ ಸಾಲ ಪಡೆದಿರುವ ರೈತರಿಗೆ ಮಾತ್ರ ಸೀಮಿತವಾಗಿದೆ. ವಾಸ್ತವದಲ್ಲಿ ಇದು ಬ್ಯಾಂಕುಗಳ ಬೆಳೆ ಸಾಲದ ವಿಮೆ ವಿನಃ ರೈತರ ಬೆಳೆ ವಿಮೆಯಲ್ಲ ಎಂದು ಅವರು ಟೀಕಿಸಿದರು.
(ಏಜನ್ಸೀಸ್)












Click it and Unblock the Notifications