ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಸ್ಕಾನ್ : ರಾಜ್ಯದ 3 ಕಡೆ ಕೃಷ್ಣ ದೇವಾಲಯ

By Staff
|
Google Oneindia Kannada News

ಬೆಂಗಳೂರು, ಜು. 15 : ಇಸ್ಕಾನ್ ಸಂಸ್ಥೆಯು ರಾಜ್ಯದ ಉಡುಪಿ, ಮೇಲುಕೋಟೆ ಮತ್ತು ಮಡಿಕೇರಿಯಲ್ಲಿ ಕೃಷ್ಣ ದೇವಾಲಯ ನಿರ್ಮಿಸಲಿದೆ. ಈ ಸಂಬಂಧ ಉಡುಪಿಯ ಕೊಡವೂರಿನಲ್ಲಿ ಎರಡು ಎಕರೆ ಜಮೀನು ಖರೀದಿಸಲಾಗಿದೆ ಎಂದು ಇಸ್ಕಾನ್ ಆಡಳಿತ ಮಂಡಳಿ ತಿಳಿಸಿದೆ.

ಉಡುಪಿಯಲ್ಲಿ ದೇವಾಲಯದ ಜೊತೆ ವೃದ್ದಾಶ್ರಮ ಕೂಡ ನಿರ್ಮಿಸಲು ಇಸ್ಕಾನ್ ನಿರ್ಧರಿಸಿದೆ. ಮಡಿಕೇರಿಯಲ್ಲಿ ಏಳು ಎಕರೆ ಜಾಗ ಖರೀದಿಸುವ ಬಗ್ಗೆ ಮಾತುಕತೆ ನಡೆಯುತ್ತಿದ್ದು, ದೇವಾಲಯದ ಜೊತೆ ಆರೋಗ್ಯ ಕೇಂದ್ರ ಹಾಗು ಸಮುದಾಯ ಭವನ ನಿರ್ಮಿಸಲಾಗುವುದು. ಇದೇ ರೀತಿ ಮೇಲುಕೋಟೆಯಲ್ಲಿ ವೃದ್ದಾಶ್ರಮ ಮತ್ತು ಬೋರ್ಡಿಂಗ್ ಶಾಲೆ ಸ್ಥಾಪಿಸಲಾಗುವುದು. ಸಂಸ್ಕೃತ, ವೇದ ಹಾಗೂ ಆಧುನಿಕ ಶಿಕ್ಷಣಗಳ ವೈಷ್ಣವ ತರಬೇತಿ ಕೇಂದ್ರ ಕೂಡಾ ಇಲ್ಲಿ ಸದ್ಯದಲ್ಲೇ ತಲೆ ಎತ್ತಲಿದೆ ಎಂದು ತಿಳಿಸಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X