Get Updates
Get notified of breaking news, exclusive insights, and must-see stories!

ದಿಲ್ಲಿಯಲ್ಲಿ ಮತ್ತೊಂದು ಅವಘಡ : 6 ಸಾವು

DMRC accident
ನವದೆಹಲಿ, ಜು. 13 : ನಿರ್ಮಾಣ ಹಂತದಲ್ಲಿದ್ದ ಮೆಟ್ರೋ ಸೇತುವೆ ಕುಸಿದು ಭಾರಿ ಅವಘಡ ಸಂಭವಿಸಿದ ಬೆನ್ನಲ್ಲೇ ಇಂದು ದುರ್ಘಟನೆ ನಡೆದ ಸ್ಥಳದಲ್ಲಿ ಪರಿಹಾರ ಕಾರ್ಯ ನಡೆಸುತ್ತಿದ್ದ ಸಮಯದಲ್ಲಿ ಕ್ರೇನ್ ಕುಸಿದು ಪರಿಹಾರ ಕಾರ್ಯದಲ್ಲಿ ತೊಡಗಿದ್ದ ಆರು ಮಂದಿ ಕಾರ್ಮಿಕರು ಸಾವನ್ನಪ್ಪಿರುವ ದಾರುಣ ಘಟನೆ ರಾಜಧಾನಿ ನವದೆಹಲಿಯಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.

ನಿರ್ಮಾಣ ಹಂತದಲ್ಲಿ ನಡೆದ ದುರ್ಘಟನೆಯಲ್ಲಿ ಸಿಕ್ಕಿಕೊಂಡಿರುವ ವಾಹನ ಮತ್ತು ವಸ್ತುಗಳ ಹೊರತೆಗೆಯುವ ಕಾರ್ಯದಲ್ಲಿ ನಿರತವಾಗಿದ್ದ ಸಮಯದಲ್ಲಿ ಮೂರು ಕ್ರೇನ್ ಗಳು ಕುಸಿದು ಬಿದ್ದಿವೆ. ಈ ಸಂದರ್ಭದಲ್ಲಿ ಅಲ್ಲಿ ಕೆಲಸ ಮಾಡುತ್ತಿದ್ದ ಆರು ಕಾರ್ಮಿಕರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಐದು ಮಂದಿ ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಏಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಭಾನುವಾರ ನಡೆದ ಘಟನೆಗೆ ಹೊಣೆ ಹೊತ್ತು ದೆಹಲಿ ಮೆಟ್ರೋ ಮುಖ್ಯಸ್ಥ ಶ್ರೀಧರನ್ ತಮ್ಮ ಹುದ್ದೆ ರಾಜೀರಾಮೆ ನೀಡುವುದಾಗಿ ಹೇಳಿದ್ದರು. ಆದರೆ, ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರ ರಾಜೀನಾಮೆಯನ್ನು ನಿರಾಕರಿಸಿದ್ದಾರೆ.

ಭಾನುವಾರ ನಡೆದ ದುರ್ಘಟನೆ

ನಿರ್ಮಾಣ ಹಂತದಲ್ಲಿದ್ದ ಮೆಟ್ರೋ ರೈಲು ಸೇತುವೆ ಕುಸಿದ ಪರಿಣಾಮ, ಐದಕ್ಕೂ ಹೆಚ್ಚು ಜನರು ಸತ್ತಿದ್ದರು. ಸುಮಾರು 15 ಜನರಿಗೆ ತೀವ್ರ ಗಾಯಗೊಂಡಿದ್ದರು. ಭಾನುವಾರ ಬೆಳಗ್ಗೆ 5 ಗಂಟೆ ಸುಮಾರಿಗೆ ಲಜ್ ಪತ್ ಪುರ ಬಳಿಯ ಲೇಡಿ ಶ್ರೀರಾಮ್ ಕಾಲೇಜಿನ ಬಳಿ ಇರುವ ನಿರ್ಮಾಣ ಹಂತದಮೆಟ್ರೋ ರೈಲು ಸೇತುವೆಯ ಒಂದು ಕಂಬ ಕುಸಿದು ಬಿತ್ತು. ಕಾಂಕ್ರೀಟ್ ಸ್ಲ್ಯಾಬ್ ಗಳು ನೆಲಕ್ಕಪ್ಪಳಿಸಿದವು. ಕಂಬ ನೆಲಕ್ಕುರಳಿದ ಪರಿಣಾಮದಿಂದ ನೀರು ಸರಬರಾಜಿನ ಪೈಪು ಒಡೆದು, ಸುತ್ತಮುತ್ತಲಿನ ಪ್ರದೇಶವೆಲ್ಲಾ ಜಲಾವೃತಗೊಂಡಿವೆ.

ಘಟನೆ ನಡೆದ ಸಂದರ್ಭದಲ್ಲಿ ಸುಮಾರು 25 ಜನ ಕಾರ್ಮಿಕರು ಕೆಲಸದಲ್ಲಿ ನಿರತರಾಗಿದ್ದರು. ಅವಶೇಷಗಳ ಅಡಿಯಲ್ಲಿ ಅಳಿದುಳಿದಿರುವ ವ್ಯಕ್ತಿಗಳನ್ನು ಬದುಕಿಸುವ ಕಾರ್ಯ ಸಾಗಿದೆ. ಗಾಯಾಳುಗಳನ್ನು ಏಮ್ಸ್ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿದ್ದವು.

(ಏಜನ್ಸೀಸ್)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+