ನೈಸ್ ಟೌನ್ ಶಿಪ್ ಗೆ ಭಾರಿ ವಿರೋಧ

ನೈಸ್ ಕಂಪನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಧಿಕ್ಕಾರ ಕೂಗಿದ ರೈತರು, ಕುಂಬಳಗೋಡು ಸುತ್ತಮುತ್ತಲ ಗ್ರಾಮಸ್ಥರು ನೈಸ್ ಸಂಸ್ಥೆ ಮುಖ್ಯಸ್ಥ ಅಶೋಕ್ ಖೇಣಿ ಅವರ ಪ್ರತಿಕೃತಿ ದಹಿಸಿದರು. ನೈಸ್ ಟೌನ್ ಶಿಪ್ ಗಾಗಿ ಕೆಐಎಡಿಬಿ ನೂರಾರು ಎಕರೆ ಭೂಮಿಯನ್ನು ವಶಪಡಿಸಿಕೊಂಡಿದೆ. ಪ್ರಸ್ತುತ ಇಲ್ಲಿನ ಭೂಮಿಗೆ ಎಕರೆಗೆ ಕೋಟಿ ರುಪಾಯಿ ಬೆಲೆ ಇದ್ದು, ರೈತರಿಗೆ 70 - 80 ಸಾವಿರ ನೀಡಲು ಮುಂದಾಗಿರುವುದರಿಂದ ರೈತರು ಆಕ್ರೋಶಗೊಂಡಿದ್ದಾರೆ.
ನೈಸ್ ಗಾಗಿ ಭೂಮಿ ಕಳೆದುಕೊಂಡವರು ಈಗಾಗಲೇ ಹಲವಾರು ಬಾರಿ ಪ್ರತಿಭಟನೆ ನಡೆಸಿ ಸಂಬಂಧಪಟ್ಟ ಸಚಿವರಿಗೆ, ಹಿಂದಿನ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ಕಿಡಿಕಾರಿದ್ದಾರೆ. ಕೆಐಎಡಿಬಿ ಅಧಿಕಾರಿಗಳು ಅನಗತ್ಯ ಗೊಂದಲ ಸೃಷ್ಟಿಸಿದ್ದಾರೆ. ಇಲ್ಲಿ ಟೌನ್ ಶಿಪ್ ಮಾಡಲು ಯಾವ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಹಾಗೊಂದು ವೇಲೆ ಟೌನ್ ಶಿಪ್ ಮಾಡಲು ಮುಂದಾದರೆ ಪ್ರಾಣ ಬಿಡಲು ಹೆದರುವುದಿಲ್ಲ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications