Get Updates
Get notified of breaking news, exclusive insights, and must-see stories!

ಪರ್ಯಾಯ ಶಕ್ತಿಯಾಗಿ ಜೈವಿಕ ಇಂಧನದ ಬಳಕೆ

YB Ramakrishna
ಆಧುನಿಕತೆಯೇ ಜೀವನ ಶೈಲಿಯಾಗುತ್ತಿರುವಾಗ ಪೆಟ್ರೋಲು ಡೀಸೆಲ್ಲು ಬಳಕೆ ದುಪ್ಪಟ್ಟು, ಮೂರ್ಪಟ್ಟಾಗುವುದು ಸ್ವಾಭಾವಿಕ. ದಿನೇದಿನೇ ಇಂಧನಕ್ಕೆ ಬೇಡಿಕೆ ಉಲ್ಬಣಿಸುತ್ತಿರುವಾಗ ನಾವು ಪರ್ಯಾಯಶಕ್ತಿ ಮೂಲಗಳನ್ನು ಸಮರ್ಥವಾಗಿ ದುಡಿಸಿಕೊಳ್ಳದೆ ವಿಧಿಯಿಲ್ಲ. ಜೈವಿಕ ಇಂಧನ ಕ್ಷೇತ್ರದಲ್ಲಿ ಕರ್ನಾಟಕ ಎಷ್ಟು ಪ್ರಗತಿ ಸಾಧಿಸಿದೆ? ಇನ್ನೆಷ್ಟು ಸಾಧಿಸಬೇಕು? ಬನ್ನಿ, ಜೈವಿಕ ಇಂಧನ ಮಂಡಳಿ ಅಧ್ಯಕ್ಷರೊಂದಿಗೆ ಮಾತಿಗಿಳಿಯೋಣ.

*ಎಂ ಬಾಬು, ಮೈಸೂರು

ಮೈಸೂರು, ಜು.10 : ವಿಶ್ವದೆಲ್ಲೆಡೆ ಪೆಟ್ರೋಲ್ ಡೀಸಲ್‌ಗಳಿಗೆ ಪರ್ಯಾಯ ಶಕ್ತಿಮೂಲಗಳ ಹುಡುಕುವಿಕೆ ಅವಿರತವಾಗಿ ನಡೆದಿದೆ. ಆದರೆ ಭಾರತದ ಬಹಳಷ್ಟು ಆದಾಯ ಆಮದು ಮಾಡಿಕೊಳ್ಳುತ್ತಿರುವ ಶಕ್ತಿಮೂಲಗಳಿಗೇ ವ್ಯಯವಾಗುತ್ತಿದೆ. ಇದನ್ನು ಕಡಿಮೆ ಮಾಡಲು ದೇಶದಲ್ಲಿ ಅವಿತರ ಪ್ರಯತ್ನಗಳು ನಡೆದಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಕೂಡ ಪರ್ಯಾಯ ಶಕ್ತಿಗಮೂಲಗಳಿಗಾಗಿ ನಿರಂತರ ಹುಡುಕಾಟ ನಡೆಸಿವೆ.

ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರವು 2008ರ ಸೆಪ್ಟೆಂಬರ್ ತಿಂಗಳಿನಲ್ಲಿ ಅಗತ್ಯ ಕಾರ್ಯಕ್ರಮ ಕೈಗೊಳ್ಳಲು ಹಾಗೂ ಅದರ ಅನುಷ್ಠಾನಕ್ಕೆ ಅಗತ್ಯ ಮಾರ್ಗಸೂಚಿಗಳನ್ನು ಒಳಗು ಮಾಡಲು ಜೈವಿಕ ಕಾರ್ಯಪಡೆ ರಚಿಸಿತು. ಈ ಕಾರ್ಯಪಡೆಯ ಅಧ್ಯಕ್ಷರಾಗಿ ವೈ.ಬಿ. ರಾಮಕೃಷ್ಣ ಅವರನ್ನು ನೇಮಿಸಿತು. ಜುಲೈ 9ರಂದು ಮೈಸೂರು ವಾರ್ತಾ ಕಚೇರಿಗೆ ಭೇಟಿ ನೀಡಿದ್ದ ಜೈವಿಕ ಕಾರ್ಯಪಡೆ ಅಧ್ಯಕ್ಷರನ್ನು ಮಾತನಾಡಿಸಿದಾಗ ಕಾರ್ಯಪಡೆಯ ವಿವರಗಳು ಲಭ್ಯವಾದವು.

ರಾಜ್ಯ ಸರ್ಕಾರ ರಚಿಸಿರುವ ಜೈವಿಕ ಕಾರ್ಯಪಡೆಯ ಮೂಲ ಉದ್ದೇಶ ಜೈವಿಕ ಇಂಧನ ಕಾರ್ಯಕ್ರಮ ಅನುಷ್ಠಾನಗೊಳಿಸುವುದು. ಈ ಪೂರಕ ಶಕ್ತಿಮೂಲ ಉತ್ಪಾದನೆಗೆ ಜನರ ಸಹಭಾಗಿತ್ವ, ಜೈವಿಕ ಇಂಧನ ಮೌಲ್ಯವರ್ಧನೆ, ಜೈವಿಕ ಬೀಜ ಉತ್ಪಾದನೆ ಮುಂತಾದವುಗಳ ಬಗ್ಗೆ ಸರ್ಕಾರಕ್ಕೆ ಸಲಹೆ ನೀಡುವುದೇ ಆಗಿದೆ.

ಜೈವಿಕ ಇಂಧನಗಳಾದ ಎಥೆನಾಲ್ ಹಾಗೂ ಬಯೋ ಡೀಸೆಲ್‌ಗಳು ಈಗಾಗಲೇ ದೇಶದಲ್ಲೇ ಪ್ರಥಮಬಾರಿಗೆ ರಾಜ್ಯದಲ್ಲಿ ಶೇ.5ರಷ್ಟು ಬಳಕೆಯಲ್ಲಿದೆ. ರಾಜ್ಯದಲ್ಲಿ ಬಳಸುತ್ತಿರುವ ಪೆಟ್ರೋಲ್ ನಲ್ಲಿ ಇದನ್ನು ಬಳಕೆ ಮಾಡುತ್ತಿದ್ದು ಕಾರ್ಯಪಡೆ ಈ ವರ್ಷಾಂತ್ಯಕ್ಕೆ ಇದನ್ನು ಶೇ.10ಕ್ಕೇರಿಸುವ ಗುರಿ ಹೊಂದಿದೆ. ಬರುವ ದಿನಗಳಲ್ಲಿ ಜೈವಿಕ ಇಂಧನ ಉತ್ಪಾದನೆಗೆ ಈಗಿರುವ ಸಸ್ಯ ಮೂಲಗಳ ಜೊತೆಗೆ ಕೃಷಿ ತ್ಯಾಜ್ಯ ಹಾಗೂ ನಗರ ತ್ಯಾಜ್ಯಗಳೆರಡನ್ನು ಜೈವಿಕ ಇಂಧನ ಉತ್ಪಾದಿಸುವ ಅಗತ್ಯ ತಂತ್ರಜ್ಞಾನದ ಬಗ್ಗೆ ಕಾರ್ಯ ರೂಪಿಸಲಾಗುತ್ತಿದೆ ಎನ್ನುತ್ತಾರೆ ರಾಮಕೃಷ್ಣ.

ಕಾರ್ಯಪಡೆ ರಚಿತವಾದ 1 ವರ್ಷದಿಂದೀಚೆಗೆ ರಾಜ್ಯದ 6000 ಹೆಕ್ಟೇರ್‌ನಷ್ಟು ಸರ್ಕಾರದ ಪಾಳುಬಿದ್ದ ಜಮೀನಿನಲ್ಲಿ ಜೈವಿಕ ಇಂಧನ ಉತ್ಪಾದನೆ ಅಗತ್ಯವಾದ ಬೀಜೋತ್ಪಾದನೆಗೆ ಗಿಡ ನೆಡುವ ಕಾರ್ಯ ಯಶಸ್ವಿಯಾಗಿದೆ. ಮುಂದಿನ ಮೂರು ವರ್ಷಗಳಲ್ಲಿ ರಾಜ್ಯವನ್ನು ಸರ್ಕಾರಿ ಹಾಗೂ ಕೃಷಿಯೇತರ ಖಾಸಗಿ ಭೂಮಿ ಸೇರಿ ಒಂದು ಲಕ್ಷ ಹೆಕ್ಟೇರ್‌ಗೆ ಹೆಚ್ಚಿಸಬೇಕೆಂಬುದು ಕಾರ್ಯಪಡೆಯ ಗುರಿಯಾಗಿದೆ. ಅಲ್ಲಿ ಸುಮಾರು 30 ಲಕ್ಷ ಸಸಿಗಳನ್ನು ನೆಡುವ ಗುರಿ ಇದೆ. ಈಗಾಗಲೇ ದಾವಣಗೆರೆ ಜಿಲ್ಲೆಯ ದಾವಣಗೆರೆ, ಜಗಳೂರು ಹಾಗೂ ಹರಪನಹಳ್ಳಿ ತಾಲ್ಲೂಕುಗಳಲ್ಲಿ ಪ್ರಾಯೋಗಿಕವಾಗಿ ಎನ್ಆರ್ಈಜಿ ಕಾರ್ಯಕ್ರಮದಡಿ ಈ ಕಾರ್ಯ ಕೈಗೊಳ್ಳಲಾಗಿದೆ.

ಪ್ರತಿ ಸಸಿ ಬೆಳೆಯಲು 22 ರೂಪಾಯಿ ಹಾಗೂ ಸಸಿಯನ್ನು ಉತ್ತಮವಾಗಿ ಬೆಳೆಸಿ ಒಂದು ವರ್ಷ ಪಾಲನೆ ಮಾಡಿದರೆ ಆರು ರೂಪಾಯಿಗಳ ನೆರವು ನೀಡಲಾಗುತ್ತದೆ.ಈಗ ರಾಜ್ಯದಲ್ಲಿ ಬಯೋಡೀಸೆಲ್ ಬಳಕೆ ನಡೆದಿದೆ. ರಸ್ತೆ ಸಾರಿಗೆ ಸಂಸ್ಥೆಯ 2000 ವಾಹನಗಳಲ್ಲಿ ಇದನ್ನು ಇಂಧನ ಮೂಲವಾಗಿ (ಶೇ7.7 ನಷ್ಟನ್ನು ಡೀಸಲ್ ಜೊತೆ) ಬಳಕೆ ಮಾಡುತ್ತಿದ್ದು ಸಾರಿಗೆ ಸಂಸ್ಥೆಯ ಎಲ್ಲ ವಾಹನಗಳಲ್ಲೂ ಬಳಕೆ ಮಾಡುವ ಉದ್ದೇಶವಿದೆ. ಜೈವಿಕ ಇಂಧನ ಬಳಕೆ ಯಶಸ್ವಿಗೊಳಿಸಲು ಹಾಸನ ಜಿಲ್ಲೆ ಮಡೆನೂರು ಬಳಿ ಜೈವಿಕ ಇಂಧನ ಉದ್ಯಾನ ರೂಪಿಸಲಾಗಿದೆ.

ಜೈವಿಕ ಬೀಜ ಉತ್ಪಾದನೆ, ಇಂಧನ ಉತ್ಪಾದನೆ, ಬಳಕೆ, ಮಾರುಕಟ್ಟೆ, ತಾಂತ್ರಿಕತೆ ಮುಂತಾದವುಗಳಿಗಾಗಿ ಕೆ ಎಂ ಎಫ್ ಮಾದರಿಯಲ್ಲಿ ಸಂಘಟನೆ ರೂಪಿಸುವ ಯತ್ನ ನಡೆದಿದೆ. ಹಾಸನ ಜಿಲ್ಲೆ 23 ಗ್ರಾಮಗಳಲ್ಲಿ ಸುಮಾರು 350 ಸಹಕಾರ ಸಂಘಗಳು ರಚನೆಗೊಂಡಿವೆ. ಅವುಗಳ ಅಧಿಕೃತ ನೋಂದಣಿ ಇನ್ನೂ ಆಗಬೇಕಿದೆ. ಕಾಲಕ್ಕೆ ತಕ್ಕಂತೆ ಪರ್ಯಾಯ ಇಂಧನ ಉತ್ಪಾದನೆಗೆ ಹೊಂಗೆ, ಬೇವು, ಹಿಪ್ಪೆ, ಜತ್ರೋಪ ಇತ್ಯಾದಿಗಳನ್ನು ಬೆಳೆಯಬಹುದಾಗಿದೆ ಎಂದು ರಾಮಕೃಷ್ಣ ಹೇಳಿದರು.

ರಾಜ್ಯದಲ್ಲಿ ಪ್ರಸ್ತುತ 5.75 ಲಕ್ಷ ಟನ್ ಹೊಂಗೆ ಬೀಜ ಉತ್ಪಾದನೆ ಆಗುತ್ತಿದೆ. ಕಾರ್ಯಪಡೆ ಜೈವಿಕ ಶಕ್ತಿ ಉತ್ಪಾದನೆ ಹಾಗೂ ಬಳಕೆಯ ಯಶಸ್ವಿ ಅನುಷ್ಠಾನಕ್ಕೆ ಜೈವಿಕ ಇಂಧನ ಮಂಡಳಿ ರಚನೆಗೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ ಎಂದು ಜೈವಿಕ ಕಾರ್ಯಪಡೆ ಅಧ್ಯಕ್ಷ ವೈ ಬಿ ರಾಮಕೃಷ್ಣ ತಿಳಿಸಿದರು.ಜೈವಿಕ ಕಾರ್ಯಪಡೆ ಕಚೇರಿಯು ಬೆಂಗಳೂರಿನ ಡಾ ಬಿ ಆರ್ ಅಂಬೇಡ್ಕರ್ ವೀದಿಯ ಬಹುಮಹಡಿ ಕಟ್ಟಡದ 5ನೇ ಹಂತದಲ್ಲಿರುವ 6ನೇ ಕೊಠಡಿಯಲ್ಲಿದೆ.

(ಮೂಲ : ಕರ್ನಾಟಕ ವಾರ್ತಾ ಇಲಾಖೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+