ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಂಗೇರುತ್ತಿರುವ ಕೆಎಂಎಫ್ ಚುನಾವಣೆ

By Staff
|
Google Oneindia Kannada News

H D Revanna
ಬೆಂಗಳೂರು, ಜು. 9 : ಕೆಎಂಎಫ್ ಚುನಾವಣೆ ಹಿಂದೆಂದಿಗಿಂತಲೂ ಜಿದ್ದಾಜಿದ್ದಿನಿಂದ ಕೂಡುತ್ತಿರುವುದು ಸ್ಪಷ್ಟವಾಗಿದೆ. ಮಾಜಿ ಪ್ರಧಾನಿ ದೇವೇಗೌಡ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ನಡುವಿನ ವೈಮನಸ್ಸು ಇದಕ್ಕೆ ಬಹುತೇಕ ಕಾರಣವಾಗಿದೆ. ಹೀಗಾಗಿ, 1993-94 ರಿಂದ ಗದ್ದುಗೆಯಲ್ಲಿರುವ ಎಚ್ ಡಿ ರೇವಣ್ಣ ಅವರನ್ನು ಶತಾಯುಗತಾಯು ಇಳಿಸಲು ಬಿಜೆಪಿ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ. ಈ ತಿಂಗಳ 9, 10,11ರಂದು ಸಂಸ್ಥೆಯ ನಿರ್ದೇಶಕರ ಮತ್ತು 20 ರಂದು ಅಧ್ಯಕ್ಷ ಹುದ್ದೆಗೆ ಚುನಾವಣೆ ನಡೆಯಲಿದೆ.

ರೇವಣ್ಣ ಅವರನ್ನು ಕೆಳಗಿಳಿಸಲು ಮೊದಲು ಬಿಜೆಪಿ ಬಳ್ಳಾರಿ ಗಣಿಧಣಿಗಳನ್ನು ಬಳಸಿಕೊಳ್ಳಲು ಮುಂದಾಗಿತ್ತು. ಬಳ್ಳಾರಿ ನಗರ ಶಾಸಕ ಸೋಮಶೇಖರರೆಡ್ಡಿ ಅವರನ್ನು ಅಧ್ಯಕ್ಷ ಚುನಾವಣೆಗೆ ಇಳಿಸಲು ಯೋಚನೆ ಮಾಡಿತ್ತಾದರೂ, ಈಗಾಗಲೇ ಕ್ಯಾಬಿನೆಟ್ ಸ್ಥಾನಮಾನದಲ್ಲಿರುವ ಬಳ್ಳಾರಿ ತ್ರಿಮೂರ್ತಿಗಳಿಗೆ ಮತ್ತೆ ಕೆಎಂಎಫ್ ಅಧ್ಯಕ್ಷ ಗಾದಿಯನ್ನು ನೀಡಲು ಬಿಜೆಪಿಗೆ ಇಷ್ಟವಿರಲಿಲ್ಲ. ಅದಕ್ಕಾಗಿ ಈಗ ಕಾಂಗ್ರೆಸ್ ನಲ್ಲಿದ್ದು ಬಿಜೆಪಿ ಬೆಂಬಲಿಸುತ್ತಿರುವ ಮಾಜಿ ಸಚಿವ ಶ್ರೀನಿವಾಸಗೌಡ ಅವರನ್ನು ಕಣಕ್ಕಿಳಿಸಲು ಬಿಜೆಪಿ ತಿರ್ಮಾನಿಸಿದೆ.

ಇತ್ತ ಜೆಡಿಎಸ್ ಕಾಂಗ್ರೆಸ್ ಬೆಂಬಲ ತಮಗೆ ಸಿಗಬಹುದೆಂಬ ನಂಬಿಕೆಯಲ್ಲಿದೆ. ಕೆಎಂಎಫ್ ನಲ್ಲಿ ಒಟ್ಟು 13 ಯುನಿಯನ್ ಗಳಿವೆ. ಹಾಸನ ಮತ್ತು ಮಂಡ್ಯ ಜಿಲ್ಲೆ ಹೊರತುಪಡಿಸಿದರೆ ಮಿಕ್ಕ ಕಡೆ ಹೆಚ್ಚುಕಮ್ಮಿ ಬಿಜೆಪಿ ಪ್ರಾಬಲ್ಯವಿದೆ. ಒಟ್ಟಿನಲ್ಲಿ 10 ಯುನಿಯನ್ ಜಯಿಸುವ ಲೆಕ್ಕಾಚಾರದಲ್ಲಿ ಬಿಜೆಪಿಯ ಉದ್ದೇಶವಾಗಿದೆ. ಬಿಜೆಪಿಯ ಎಲ್ಲಾ ಲೆಕ್ಕಾಚಾರ ಸರಿಹೋದರೆ ಎಚ್ ಡಿ ರೇವಣ್ಣ ಅವರ ಪಾರುಪತ್ಯ ಅಂತ್ಯಗೊಳ್ಳುವ ಲಕ್ಷಣಗಳು ಕಾಣಿಸುತ್ತಿವೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X