ರಂಗೇರುತ್ತಿರುವ ಕೆಎಂಎಫ್ ಚುನಾವಣೆ

ರೇವಣ್ಣ ಅವರನ್ನು ಕೆಳಗಿಳಿಸಲು ಮೊದಲು ಬಿಜೆಪಿ ಬಳ್ಳಾರಿ ಗಣಿಧಣಿಗಳನ್ನು ಬಳಸಿಕೊಳ್ಳಲು ಮುಂದಾಗಿತ್ತು. ಬಳ್ಳಾರಿ ನಗರ ಶಾಸಕ ಸೋಮಶೇಖರರೆಡ್ಡಿ ಅವರನ್ನು ಅಧ್ಯಕ್ಷ ಚುನಾವಣೆಗೆ ಇಳಿಸಲು ಯೋಚನೆ ಮಾಡಿತ್ತಾದರೂ, ಈಗಾಗಲೇ ಕ್ಯಾಬಿನೆಟ್ ಸ್ಥಾನಮಾನದಲ್ಲಿರುವ ಬಳ್ಳಾರಿ ತ್ರಿಮೂರ್ತಿಗಳಿಗೆ ಮತ್ತೆ ಕೆಎಂಎಫ್ ಅಧ್ಯಕ್ಷ ಗಾದಿಯನ್ನು ನೀಡಲು ಬಿಜೆಪಿಗೆ ಇಷ್ಟವಿರಲಿಲ್ಲ. ಅದಕ್ಕಾಗಿ ಈಗ ಕಾಂಗ್ರೆಸ್ ನಲ್ಲಿದ್ದು ಬಿಜೆಪಿ ಬೆಂಬಲಿಸುತ್ತಿರುವ ಮಾಜಿ ಸಚಿವ ಶ್ರೀನಿವಾಸಗೌಡ ಅವರನ್ನು ಕಣಕ್ಕಿಳಿಸಲು ಬಿಜೆಪಿ ತಿರ್ಮಾನಿಸಿದೆ.
ಇತ್ತ ಜೆಡಿಎಸ್ ಕಾಂಗ್ರೆಸ್ ಬೆಂಬಲ ತಮಗೆ ಸಿಗಬಹುದೆಂಬ ನಂಬಿಕೆಯಲ್ಲಿದೆ. ಕೆಎಂಎಫ್ ನಲ್ಲಿ ಒಟ್ಟು 13 ಯುನಿಯನ್ ಗಳಿವೆ. ಹಾಸನ ಮತ್ತು ಮಂಡ್ಯ ಜಿಲ್ಲೆ ಹೊರತುಪಡಿಸಿದರೆ ಮಿಕ್ಕ ಕಡೆ ಹೆಚ್ಚುಕಮ್ಮಿ ಬಿಜೆಪಿ ಪ್ರಾಬಲ್ಯವಿದೆ. ಒಟ್ಟಿನಲ್ಲಿ 10 ಯುನಿಯನ್ ಜಯಿಸುವ ಲೆಕ್ಕಾಚಾರದಲ್ಲಿ ಬಿಜೆಪಿಯ ಉದ್ದೇಶವಾಗಿದೆ. ಬಿಜೆಪಿಯ ಎಲ್ಲಾ ಲೆಕ್ಕಾಚಾರ ಸರಿಹೋದರೆ ಎಚ್ ಡಿ ರೇವಣ್ಣ ಅವರ ಪಾರುಪತ್ಯ ಅಂತ್ಯಗೊಳ್ಳುವ ಲಕ್ಷಣಗಳು ಕಾಣಿಸುತ್ತಿವೆ.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications