ಬಿಜೆಪಿ ಸಂಸದರಿಗೆ ಅಡ್ವಾಣಿ ಕಿವಿಮಾತು

ಈ ಕುರಿತು ಪ್ರತಿಕ್ರಿಯೆ ನೀಡಿರುವ ಪಕ್ಷದ ಮುಖಂಡ ಅಬ್ಬಾಸ್ ಅಲೀ ನಕ್ವಿ, ಲೋಕಸಭೆ ಫಲಿತಾಂಶದ ನಂತರ ಪಕ್ಷದ ಕೆಲ ಮುಖಂಡರು ಮಾಧ್ಯಮಗಳಿಗೆ ಮುಖ ಮಾಡಿದ್ದು, ಅಜ್ವಾಣಿಜೀ ಅವರಿಗೆ ತುಂಬಾ ನೋವು ತಂದಿದೆ. ಇಂತಹ ವರ್ತನೆಯಿಂದ ಪಕ್ಷದ ಇಮೇಜಿಗೆ ಭಾರಿ ಪೆಟ್ಟು ಬೀಳಲಿದೆ. ಆದ್ದರಿಂದ ಮುಖಂಡರ ಸೇರಿ ಬಿಜೆಪಿಯ ಎಲ್ಲ ಸಂಸದರೂ ತಮ್ಮ ಬಾಯಿಗೆ ಬೀಗ ಹಾಕಬೇಕು ಎಂದು ಖಡಕ್ಕಾಗಿ ಅಡ್ವಾಣಿಜೀ ಸೂಚನೆ ನೀಡಿದ್ದಾರೆ ಎಂದು ನಕ್ವಿ ವಿವರಿಸಿದರು.
ಮಂಗಳವಾರ ಎಲ್ ಕೆ ಅಡ್ವಾಣಿ ಅವರು ಬಿಜೆಪಿಯಿಂದ ಆಯ್ಕೆಯಾಗಿರುವ ನೂತನ ಸಂಸದರ ಸಭೆಯಲ್ಲಿ ಮಾತನಾಡಿ ಈ ಸಲಹೆ ನೀಡಿದ್ದರು. ಪ್ರತಿಪಕ್ಷಗಳಿಗೆ ಪಕ್ಷದ ಆಂತರಿಕ ಸಮಸ್ಯೆಗಳು ಆಹಾರವಾಗುವುದು. ನಮ್ಮಲ್ಲಿ ಭಿನ್ನಾಭಿಪ್ರಾಯಗಳು ಇದ್ದರೆ ಅವುಗಳನ್ನು ಪಕ್ಷದ ವೇದಿಕೆಯಲ್ಲೇ ಬಗೆಹರಿಸಕೊಳ್ಳಬೇಕೇ ವಿನಃ ಮಾಧ್ಯಮಗಳ ಮುಂದೆ ತೆಗೆದುಕೊಂಡುವುದು ತರವಲ್ಲ ಎಂದು ಹೇಳಿದರು.
(ಏಜನ್ಸೀಸ್)












Click it and Unblock the Notifications