ಬಿಜೆಪಿ ಸಂಸದರಿಗೆ ಅಡ್ವಾಣಿ ಕಿವಿಮಾತು

LK Advani
ನವದೆಹಲಿ, ಜು. 8 : ಲೋಕಸಭೆ ಚುನಾವಣೆಯಲ್ಲಿ ಸೋಲನುಭವಿಸಿದ ನಂತರ ಪಕ್ಷದಲ್ಲಿ ಆಳಿಗೊಬ್ಬರಂತೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಪ್ರಕರಣಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಬಿಜೆಪಿ ಹಿರಿಯ ಮುಖಂಡ ಎಲ್ ಕೆ ಅಡ್ವಾಣಿ ಅವರು, ಪಕ್ಷದಲ್ಲಿ ನೂರೆಂಟು ವಕ್ತಾರರಿದ್ದಾರೆ ಎಂದು ತಮ್ಮ ಆಕ್ರೋಶವನ್ನು ಬಹಿರಂಗಪಡಿಸಿದ್ದರು. ಅದರ ಜೊತೆಗೆ ಬಿಜೆಪಿ ನಾಯಕರ ಹಾಗೂ ಸಂಸದರು ಹೇಗೆ ವರ್ತಿಸಬೇಕು ಸಲಹೆ ಸೂಚನೆಗಳನ್ನು ಅವರು ನೀಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಪಕ್ಷದ ಮುಖಂಡ ಅಬ್ಬಾಸ್ ಅಲೀ ನಕ್ವಿ, ಲೋಕಸಭೆ ಫಲಿತಾಂಶದ ನಂತರ ಪಕ್ಷದ ಕೆಲ ಮುಖಂಡರು ಮಾಧ್ಯಮಗಳಿಗೆ ಮುಖ ಮಾಡಿದ್ದು, ಅಜ್ವಾಣಿಜೀ ಅವರಿಗೆ ತುಂಬಾ ನೋವು ತಂದಿದೆ. ಇಂತಹ ವರ್ತನೆಯಿಂದ ಪಕ್ಷದ ಇಮೇಜಿಗೆ ಭಾರಿ ಪೆಟ್ಟು ಬೀಳಲಿದೆ. ಆದ್ದರಿಂದ ಮುಖಂಡರ ಸೇರಿ ಬಿಜೆಪಿಯ ಎಲ್ಲ ಸಂಸದರೂ ತಮ್ಮ ಬಾಯಿಗೆ ಬೀಗ ಹಾಕಬೇಕು ಎಂದು ಖಡಕ್ಕಾಗಿ ಅಡ್ವಾಣಿಜೀ ಸೂಚನೆ ನೀಡಿದ್ದಾರೆ ಎಂದು ನಕ್ವಿ ವಿವರಿಸಿದರು.

ಮಂಗಳವಾರ ಎಲ್ ಕೆ ಅಡ್ವಾಣಿ ಅವರು ಬಿಜೆಪಿಯಿಂದ ಆಯ್ಕೆಯಾಗಿರುವ ನೂತನ ಸಂಸದರ ಸಭೆಯಲ್ಲಿ ಮಾತನಾಡಿ ಈ ಸಲಹೆ ನೀಡಿದ್ದರು. ಪ್ರತಿಪಕ್ಷಗಳಿಗೆ ಪಕ್ಷದ ಆಂತರಿಕ ಸಮಸ್ಯೆಗಳು ಆಹಾರವಾಗುವುದು. ನಮ್ಮಲ್ಲಿ ಭಿನ್ನಾಭಿಪ್ರಾಯಗಳು ಇದ್ದರೆ ಅವುಗಳನ್ನು ಪಕ್ಷದ ವೇದಿಕೆಯಲ್ಲೇ ಬಗೆಹರಿಸಕೊಳ್ಳಬೇಕೇ ವಿನಃ ಮಾಧ್ಯಮಗಳ ಮುಂದೆ ತೆಗೆದುಕೊಂಡುವುದು ತರವಲ್ಲ ಎಂದು ಹೇಳಿದರು.

(ಏಜನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+