ಸಮುದ್ರ ಮಾರ್ಗಕ್ಕೆ ಸಾವರ್ಕರ್ ಹೆಸರಿಡಿ
ಮಂಗಳವಾರ ನಡೆದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ್ದ ಶರದ್ ಪವಾರ್, ರಾಜೀವ್ ಗಾಂಧಿ ಭಾರತದ ದೊಡ್ಡ ಆಸ್ತಿ. ಅಲ್ಲದೇ ಅವರು ಹುಟ್ಟಿರುವುದು ಕೂಡಾ ಮುಂಬೈಯಲ್ಲಿ. ಈ ನೆಲದ ಮಗನಾಗಿರುವ ಅವರು ದೇಶಕ್ಕಾಗಿ ಪ್ರಾಣ ತೆತ್ತಿದ್ದಾರೆ. ಅಂತಹ ಮಹನೀಯರ ಹೆಸರನ್ನು ದೇಶದ ಪ್ರಥಮ ಸಮುದ್ರ ಮಾರ್ಗಕ್ಕೆ ಇಟ್ಟರೆ ಅದಕ್ಕೊಂದು ಗೌರವ ಬರಲಿದೆ ಎಂದು ಅವರ ತಮ್ಮ ಭಾಷಣದಲ್ಲಿ ಹೇಳಿದ್ದರು.
ವೊರ್ಲಿಯ ರಂಗ ಶಾರದಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಉದ್ಘಾಟನಾ ಸಮಾರಂಭದಲ್ಲಿ ಶರದ್ ಪವಾರ್ ಅವರು ದೇಶದ ಸಮುದ್ರ ಮಾರ್ಗಕ್ಕೆ ರಾಜೀವ್ ಗಾಂಧಿ ಹೆಸರಡಿಬೇಕು ಎಂದು ಪ್ರಸ್ತಾಪ ಮಾಡುತ್ತಿದ್ದಂತೆಯೇ ಮಹಾರಾಷ್ಟ್ರ ಮುಖ್ಯಮಂತ್ರಿ ಅಶೋಕ್ ಚವಾಣ್ ಅವರ ಸಮುದ್ರ ಮಾರ್ಗಕ್ಕೆ ರಾಜೀವ್ ಗಾಂಧಿ ಹೆಸರಿಡಲು ಸರಕಾರದ ಸಮ್ಮತಿಯಿದೆ ಎಂದು ಹೇಳಿದ್ದರು. ಸಮುದ್ರವನ್ನು ಯುಪಿಎ ಚೇರ್ ಮನ್ ಸೋನಿಯಾ ಗಾಂಧಿ ಉದ್ಘಾಟಿಸಿದ್ದರು.
ಅರೆಬ್ಬಿ ಸಮುದ್ರಕ್ಕೆ ಸೇತುವೆ ಕಟ್ಟಲಾಗಿದ್ದು, ವೊರ್ಲಿ ಮತ್ತು ಬಾಂದ್ರಾಗಳನ್ನು ಸಂಪರ್ಕನಾಡಿ ಕಾರ್ಯನಿರ್ವಹಿಸಲಿದೆ. ಈ ಮಾರ್ಗಕ್ಕೆ ಸುಮಾರು 1,634 ಕೋಟಿ ರುಪಾಯಿಗಳನ್ನು ವೆಚ್ಚ ಮಾಡಲಾಗಿದೆ. ಈ ರಸ್ತೆ ಮೂಲಕ ದಿನಕ್ಕೆ ಒಂದೂವರೆ ಲಕ್ಷ ವಾಹನಗಳು ಸಂಚರಿಸುತ್ತವೆ ಎಂದು ಅಂದಾಜಿಸಲಾಗಿದೆ. ಸಂಚಾರಕ್ಕೆ ಚಿಕ್ಕ ವಾಹನ 50 ಹಾಗೂ ದೊಡ್ಡ ವಾಹನಗಳಿಗೆ 100 ರುಪಾಯಿ ಟೋಲ್ ನಿಗದಿಪಡಿಸಲಾಗಿದೆ.
(ಏಜನ್ಸೀಸ್)