ವಿದ್ಯುತ್ ದರ ಏರಿಕೆ : ಶಿವಸೇನೆ ಪ್ರತಿಭಟನೆ
ಮುಂಬೈ, ಜೂ. 24 : ಆರ್ಥಿಕ ಸಂಕಷ್ಟದ ಸಮಯದಲ್ಲಿ ವಿದ್ಯುತ್ ದರ ಏರಿಕೆ ಮಾಡಿರುವ ರಿಲೈಯನ್ಸ್ ಕಂಪನಿಯ ಕ್ರಮವನ್ನು ಖಂಡಿಸಿ ಶಿವಸೇನೆ ಕಾರ್ಯಕರ್ತರು ರಿಲೈಯನ್ಸ್ ಎನರ್ಜಿ ಕಚೇರಿ ಮುಂದೆ ಪ್ರತಿಭಟನೆ ಆರಂಭಿಸಿದ್ದಾರೆ.
ನಗರದ ವೊರ್ಲಿ ಮತ್ತು ಅಂಧೇರಿಯಲ್ಲಿರುವ ರಿಲೈಯನ್ಸ್ ಕಚೇರಿ ಮುಂದೆ ಪ್ರತಿಭಟನೆ ತೀವ್ರಗೊಂಡಿದ್ದು, ಕಾಂಡಿವಲಿಯಲ್ಲಿನ ರಿಲೈಯನ್ಸ್ ಕಚೇರಿ ಮುಂದಿದ್ದ ಲಾರಿಯೊಂದಕ್ಕೆ ಕಾರ್ಯಕರ್ತರು ಬೆಂಕಿ ಹಚ್ಚಿದ್ದಾರೆ. ಇದರಿಂದ ಕೆಲ ಪ್ರದೇಶಗಳಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿದೆ. ವಿದ್ಯುತ್ ದರದ ಸ್ಥಿರತೆ ಕಾಯ್ದುಕೊಳ್ಳದಿದ್ದರೆ ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸಲಬೇಕಾಗುತ್ತದೆ ಎಂದು ಶಿವಸೇನೆ ವಕ್ತಾರ ಸಂಜಯ್ ರಾವತ್ ಎಚ್ಚರಿಸಿದ್ದಾರೆ.
ಶಿವಸೇನೆ ಪಕ್ಷದ ಮುಖವಾಣಿ ಸಾಮ್ನಾದಲ್ಲಿ ಇತ್ತೀಚೆಗೆ ರಿಲೈಯನ್ಸ್ ಏನರ್ಜಿ ಕಂಪನಿಯ ವಿದ್ಯುತ್ ದರ ಏರಿಕೆ ಕ್ರಮಕ್ಕೆ ಅಸಮಾಧಾನ ವ್ಯಕ್ತವಾಗಿತ್ತು. ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಈ ಸಮಯದಲ್ಲಿ ವಿದ್ಯುತ್ ಏರಿಕೆಯಿಂದ ಜನರ ಮೇಲೆ ಅನಗತ್ಯ ಹೊರೆ ಬೀಳಲಿದೆ. ಈ ಕ್ರಮವನ್ನು ರಿಲೈಯನ್ಸ್ ಕಂಪನಿ ಕೂಡಲೇ ಹಿಂಪಡೆಯಬೇಕು. ರಿಲೈಯನ್ಸ್, ಬೆಸ್ಟ್, ಟಾಟಾ ಮತ್ತು ಮಹಾವಿತರನ್ ವಿದ್ಯುತ್ ಕಂಪನಿಗಳು ಜನರ ಜೀವ ಹಿಂಡುತ್ತಿದ್ದಾರೆ ಎಂದು ಸಾಮ್ನಾದಲ್ಲಿ ವರದಿಯಾಗಿತ್ತು.
(ಏಜನ್ಸೀಸ್)












Click it and Unblock the Notifications