ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಚಲಿಸುವ ರೈಲಿನಿಂದ ಹೊರತಳ್ಳಿ ಗರ್ಭಿಣಿ ಕೊಲೆ
ಲಕ್ನೋ, ಜೂ. 20: ರೈಲಿನಲ್ಲಿ ಸಾಗಿಸುತ್ತಿದ್ದ ಸೈಕಲ್ ಗೆ ಟಿಕೆಟ್ ಪಡೆದಿಲ್ಲ ಎಂಬ ಕಾರಣಕ್ಕೆ ರೈಲ್ವೇ ಪೋಲೀಸರು ತುಂಬು ಗರ್ಭಿಣಿ ಮಹಿಳೆ (ಕವಿತಾ) ಮತ್ತು ಆಕೆಯ ಮಗಳನ್ನು ಚಲಿಸುತ್ತಿದ್ದ ರೈಲಿನಿಂದ ಹೊರದಬ್ಬಿದ ಅಮಾನವೀಯ ಘಟನೆ ವರದಿಯಾಗಿದೆ. ಹೊರದಬ್ಬಲ್ಪಟ್ಟ ಮಹಿಳೆ ಸಾವನ್ನಪ್ಪಿದ್ದು, ಮಗಳು ತೀವ್ರ ಗಾಯಗೊಂಡಿದ್ದಾರೆ.
ಮೈಲಾನಿಯಿಂದ ಗೊಂಡಾ ಕಡೆ ಪ್ರಯಾಣಿಸುತ್ತಿದ್ದ ರೈಲಿನಲ್ಲಿ ದಿನೇಶ್ ಕುಮಾರ್ ಎಂಬವರು ತನ್ನ ಪತ್ನಿ ಮತ್ತು ಪುತ್ರಿಯೊಂದಿಗೆ ತೆರಳುತ್ತಿದ್ದಾಗ ರೈಲ್ವೆ ಪೇದೆಗಳಾದ ರಾಮಸಿಂಗ್ ಮತ್ತು ಸುದೀರ್ ಸಿಂಗ್ ತಪಾಸಣೆಗಾಗಿ ಬಂದರು. ದಿನೇಶ್ ಸಾಗಿಸುತ್ತಿದ್ದ ಸೈಕಲ್ ಗೆ ಸರಕು ಟಿಕೆಟ್ ಪಡೆದಿಲ್ಲ ಎನ್ನುವ ಕಾರಣಕ್ಕೆ ಪೋಲೀಸರು ಮತ್ತ್ತು ದಿನೇಶ್ ನಡುವೆ ಮಾತಿನ ಚಕಮಕಿ ನಡೆಯುತ್ತಿದ್ದಾಗ ಅಡ್ಡಬಂದ ಪತ್ನಿ ಕವಿತಾ ಮತ್ತು ಆಕೆಯ ಪುತ್ರಿಯನ್ನು ಹೊರದಬ್ಬಿದರು. ಈ ಘಟನೆ ಲಕ್ಕಿಂಪುರ ಕೇರಿ ಜಿಲ್ಲೆಯ ರೈಲು ನಿಲ್ದಾಣದ ಸಮೀಪ ನಡೆದಿದೆ.
(ಏಜೆನ್ಸೀಸ್)
Comments
Story first published: Saturday, June 20, 2009, 12:07 [IST]