ಬಂಡೀಪುರ ಸಂಚಾರ ಇದೀಗ ಮುಕ್ತ ಮುಕ್ತ
ಚಾಮರಾಜನಗರ, ಜೂ. 18 : ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ರಾತ್ರಿ ವೇಳೆ ವಾಹನ ಸಂಚಾರ ನಿಷೇಧ ಕಾರ್ಯರೂಪಕ್ಕೆ ಬರುವ ಮೊದಲೇ ಆದೇಶವನ್ನು ಹಿಂಪಡೆಯಲಾಗಿದೆ. ಸರಕಾರ ಆದೇಶವನ್ನು ಹಿಂಪಡೆಯಲು ಮರಳು ಲಾಬಿ ಕಾರಣ ಎನ್ನಲಾಗಿದೆ.
ಬೆಂಗಳೂರಿನಿಂದ ಕ್ಯಾಲಿಕಟ್ ಗೆ ಸಂಪರ್ಕ ಕಲ್ಪಿಸುವ ಹತ್ತಿರದ ಮಾರ್ಗ ರಾಷ್ಟ್ರೀಯ ಹೆದ್ದಾರಿ 212 ರಲ್ಲಿ ಸಂಚಾರ ನಿರ್ಬಂಧಿಸಿದರೆ ಕೇರಳಕ್ಕೆ ಮೈಸೂರು ಕಡೆಯಿಂದ ಪ್ರಮುಖ ಮಾರ್ಗವೊಂದನ್ನು ಮುಚ್ಚಿದಂತಾಗುತ್ತದೆ. ಇದರಿಂದ ಪ್ರಯಾಣಿಕರಿಗೆ ಹಾಗೂ ಮರಳು ಸಾಗಣಿಕೆಗೆ ತೊಂದರೆಯುಂಟಾಗುತ್ತದೆ ಎಂಬ ಕಾರಣದಿಂದ ಈ ಆದೇಶವನ್ನು ಹಿಂಪಡೆಯಲಾಗಿದೆ ಎಂದು ತಿಳಿದು ಬಂದಿದೆ. ಆದರೆ, ಇದರೊಂದಿಗೆ ಲಾರಿ ಲಾಬಿ ಕೆಲಸ ಮಾಡಿದೆ ಎನ್ನಲಾಗಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications