ಸೋಲು ನಾಯಕರನ್ನು ಕೆಂಗೆಡಿಸಿದೆ, ಸುಷ್ಮಾ

Sushma Swaraj
ಬೋಪಾಲ್, ಜೂ. 15 : ಲೋಕಸಭೆ ಸೋಲಿನ ನಂತರ ಬಿಜೆಪಿಯಲ್ಲಿ ಅಸಮಾಧಾನದ ಬಿರುಗಾಳಿಗೆ ಪಕ್ಷ ತಲ್ಲಣಗೊಂಡಿದೆ. ಪಕ್ಷದ ಮುಖಂಡರ ಕಾರ್ಯಕ್ಷಮತೆಗೆ ಬೇಸತ್ತು ಹಿರಿಯ ಮುಖಂಡ ಯಶವಂತ್ ಸಿನ್ಹಾ ಸಂಸದ ಸ್ಥಾನ ಹೊರತುಪಡಿಸಿ ಉಳಿದ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ. ಸದ್ಯಕ್ಕೆ ಬಿಜೆಪಿಯಲ್ಲಿ ಎದ್ದಿರುವ ಆರೋಪ ಪ್ರತ್ಯಾರೋಪಗಳು ತಣ್ಣಗಾಗುವ ಲಕ್ಷಣಗಳು ಕಾಣುತ್ತಿಲ್ಲ. ಆದರೆ, ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಈ ಕುರಿತು ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ದಾಖಲೆ ಮತಗಳಿಂದ ಆಯ್ಕೆಯಾದ ವಿದಿಶಾ ಲೋಕಸಭೆ ಕ್ಷೇತ್ರ ಭೇಟಿ ನೀಡಿದ ಅವರು, ಪಕ್ಷದಲ್ಲಿ ಎದ್ದಿರುವ ಬಂಡಾಯಕ್ಕೆ ಸಂಬಂಧಿಸಿದಂತೆ ಮಾಧ್ಯಮ ಪ್ರತಿನಿಧಿಗಳು ಕೇಳಿದ ಯಾವ ಪ್ರಶ್ನೆಗೂ ಉತ್ತರಿಸಿದ ಮೌನ ವಹಿಸಿದರು. ಆದರೆ, ಸುದ್ದಿಗಾರರು ಪಟ್ಟು ಬಿಡದಿರುವ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ಪಕ್ಷ ಸೋತ ನಂತರ ನೋವಾಗುವುದು ಸಹಜ. ಅದನ್ನು ಕೆಲ ಮುಖಂಡರು ಬಹಿರಂಗವಾಗಿ ಮಾತನಾಡುತ್ತಿದ್ದಾರೆ ಅಷ್ಟೇ. ಮುಂದಿನ ದಿನಗಳಲ್ಲಿ ಎಲ್ಲವೂ ಸರಿಹೋಗಲಿದೆ ಎಂದು ಹೇಳಿದರು.

ಹಿರಿಯ ಮುಖಂಡ ಎಲ್ ಕೆ ಅಡ್ವಾಣಿ ಅವರನ್ನು ಪ್ರಧಾನಮಂತ್ರಿ ಹುದ್ದೆಗೆ ಬಿಂಬಿಸಿದ್ದರಲ್ಲಿ ಯಾವುದೇ ತಪ್ಪು ಇಲ್ಲ. ಒಂದು ವೇಳೆ ಎನ್ ಡಿಎ ಹೆಚ್ಚು ಸ್ಥಾನಗಳನ್ನು ಗಳಿಸಿದ್ದರೆ, ಖಂಡಿತವಾಗಿಯೂ ಅಡ್ವಾಣಿ ಅವರು ಈ ದೇಶದ ಪ್ರಧಾನಮಂತ್ರಿಯಾಗುತ್ತಿದ್ದರು ಅದರಲ್ಲಿ ಸಂಶಯವೇ ಇರುತ್ತಿರಲಿಲ್ಲ. ಆದರೆ, ದೇಶದ ಜನತೆ ಬಿಜೆಪಿ ಕೈಹಿಡಿಯಲಿಲ್ಲ ಎಂದು ನೋವಿನಿಂದ ನುಡಿದರು.

(ಏಜನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+