ಸೋಲು ನಾಯಕರನ್ನು ಕೆಂಗೆಡಿಸಿದೆ, ಸುಷ್ಮಾ

ಲೋಕಸಭೆ ಚುನಾವಣೆಯಲ್ಲಿ ದಾಖಲೆ ಮತಗಳಿಂದ ಆಯ್ಕೆಯಾದ ವಿದಿಶಾ ಲೋಕಸಭೆ ಕ್ಷೇತ್ರ ಭೇಟಿ ನೀಡಿದ ಅವರು, ಪಕ್ಷದಲ್ಲಿ ಎದ್ದಿರುವ ಬಂಡಾಯಕ್ಕೆ ಸಂಬಂಧಿಸಿದಂತೆ ಮಾಧ್ಯಮ ಪ್ರತಿನಿಧಿಗಳು ಕೇಳಿದ ಯಾವ ಪ್ರಶ್ನೆಗೂ ಉತ್ತರಿಸಿದ ಮೌನ ವಹಿಸಿದರು. ಆದರೆ, ಸುದ್ದಿಗಾರರು ಪಟ್ಟು ಬಿಡದಿರುವ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ಪಕ್ಷ ಸೋತ ನಂತರ ನೋವಾಗುವುದು ಸಹಜ. ಅದನ್ನು ಕೆಲ ಮುಖಂಡರು ಬಹಿರಂಗವಾಗಿ ಮಾತನಾಡುತ್ತಿದ್ದಾರೆ ಅಷ್ಟೇ. ಮುಂದಿನ ದಿನಗಳಲ್ಲಿ ಎಲ್ಲವೂ ಸರಿಹೋಗಲಿದೆ ಎಂದು ಹೇಳಿದರು.
ಹಿರಿಯ ಮುಖಂಡ ಎಲ್ ಕೆ ಅಡ್ವಾಣಿ ಅವರನ್ನು ಪ್ರಧಾನಮಂತ್ರಿ ಹುದ್ದೆಗೆ ಬಿಂಬಿಸಿದ್ದರಲ್ಲಿ ಯಾವುದೇ ತಪ್ಪು ಇಲ್ಲ. ಒಂದು ವೇಳೆ ಎನ್ ಡಿಎ ಹೆಚ್ಚು ಸ್ಥಾನಗಳನ್ನು ಗಳಿಸಿದ್ದರೆ, ಖಂಡಿತವಾಗಿಯೂ ಅಡ್ವಾಣಿ ಅವರು ಈ ದೇಶದ ಪ್ರಧಾನಮಂತ್ರಿಯಾಗುತ್ತಿದ್ದರು ಅದರಲ್ಲಿ ಸಂಶಯವೇ ಇರುತ್ತಿರಲಿಲ್ಲ. ಆದರೆ, ದೇಶದ ಜನತೆ ಬಿಜೆಪಿ ಕೈಹಿಡಿಯಲಿಲ್ಲ ಎಂದು ನೋವಿನಿಂದ ನುಡಿದರು.
(ಏಜನ್ಸೀಸ್)











Click it and Unblock the Notifications