ಹಳೆ ದ್ವೇಷಕ್ಕೆ ವೃದ್ಧೆಯ ಮಾನ ಅಪಹರಣ
ಬೆಂಗಳೂರು, ಜೂ. 15 : ಹಳೆ ದ್ವೇಷಕ್ಕೆ ಸಂಬಂಧಿಸಿದಂತೆ 60 ವರ್ಷದ ವೃದ್ಧೆಯೊಬ್ಬರನ್ನು ಅಪಹರಿಸಿ ಆಕೆಯನ್ನು ವಿವಸ್ತ್ರಗೊಳಿಸಿ ಇಡೀ ರಾತ್ರಿ ದೈಹಿಕ ಹಿಂಸೆ ನೀಡಿದ ಘಟನೆ ಎಚ್ ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮುನಿಯಮ್ಮ ಎಂಬ ವೃದ್ಧೆ ದೈಹಿಕ ಚಿತ್ರಹಿಂಸೆಗೆ ಒಳಗಾಗಿರುವ ಮಹಿಳೆ.
ಭೂವಿವಾದಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ನಡೆದ ಜೋಡಿ ಕೊಲೆಗೆ ನಡೆದಿತ್ತು. ಇದರಿಂದಾಗಿ ಕಾಡಬಿಸನಹಳ್ಳಿ ಮತ್ತು ಕರಿಯಮ್ಮನ ಅಗ್ರಹಾರ ಪ್ರದೇಶಗಳಿಗೆ ದ್ವೇಷ ಮುಂದುವರೆದಿತ್ತು. ಕರಿಯಮ್ಮನ ಅಗ್ರಹಾರದ ಕೆಲ ರೌಡಿಗಳು ಕಾಡಬಿಸನಹಳ್ಳಿ ಜನರಿಗೆ ಪದೆಪದೇ ಕಿರುಕುಳ ನೀಡುತ್ತಿದ್ದರು ಎಂದು ಹೇಳಲಾಗಿದೆ. ಆದರೆ, ಭಾನುವಾರ ಟಾಟಾ ಇಂಡಿಯಾ ಕಾರಿನಲ್ಲಿ ಬಂದ ಈ ಐವರ ತಂಡ 60 ವರ್ಷದ ಮುನಿಯಮ್ಮ ಎಂಬ ವೃದ್ಧೆಯನ್ನು ಕಾಡಬಿಸನಹಳ್ಳಿಯ ಮನೆಯೊಂದರಿಂದ ಅಪಹರಿಸಿ, ದೂರದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಆಕೆಗೆ ದೈಹಿಕ ಹಿಂಸೆ ನೀಡಿದ್ದಲ್ಲದೇ ಸರಹೊತ್ತಿನಲ್ಲಿ ನಿರ್ಜನ ಪ್ರದೇಶದಲ್ಲಿಯೇ ಬಿಟ್ಟು ತೆರಳಿದ್ದಾರೆ. ನಂತರ ರಾತ್ರಿಯಿಡೀ ಅಟೋವೊಂದರಲ್ಲಿ ಮಲಗಿದ ವೃದ್ಧೆ. ಬೆಳಗ್ಗೆ ಎಚ್ ಎಎಲ್ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾಳೆ.
ವೃದ್ದೆಯ
ಮೇಲೆ
ಅತ್ಯಾಚಾರ
ನಡೆದಿರುವ
ಸಂಶಯದ
ಹಿನ್ನೆಲೆಯಲ್ಲಿ
ಆಕೆಯನ್ನು
ಹೆಚ್ಚಿನ
ಚಿಕಿತ್ಸೆ
ಹಾಗೂ
ಪರೀಕ್ಷೆ
ಒಳಪಡಿಸಲಾಗಿದೆ.
ಘಟನೆಗೆ
ಸಂಬಂಧಿಸಿದಂತೆ
ಚಂದ್ರು,
ಸೋಮ,
ಮುನಿರಾಜು,
ಗೋವಿಂದ
ಹಾಗೂ
ಶ್ರೀನಿವಾಸ
ಎಂಬುವವರನ್ನು
ಎಚ್
ಎಎಲ್
ಪೊಲೀಸರು
ವಶಕ್ಕೆ
ತೆಗೆದುಕೊಂಡಿದ್ದಾರೆ
ಎಂದು
ಮೂಲಗಳು
ತಿಳಿಸಿವೆ.
(ದಟ್ಸ್
ಕನ್ನಡ
ವಾರ್ತೆ)