ಕಾಳಿ ನದಿಯಲ್ಲಿ ವಿಜ್ಞಾನಿ ಮಹಾಲಿಂಗಂ ದೇಹ ಪತ್ತೆ

ದೇಶಾದ್ಯಂತ ಸುದ್ದಿ ಮಾಡಿದ್ದ ಮಹಾಲಿಂಗಂ ನಾಪತ್ತೆ ಪ್ರಕರಣ ಈ ಮೂಲಕ ದುಃಖಾಂತ್ಯ ಕಂಡಿದೆ. ಜೂನ್ 8 ರಂದು ಬೆಳಗ್ಗೆ 6ಗಂಟೆ ಸುಮಾರಿಗೆ ಮಲ್ಲಾಪುರ ಟೌನ್ ಷಿಪ್ ನ ಅವರ ನಿವಾಸದಿಂದ ಜಾಗಿಂಗ್ ಗೆಂದು ತೆರಳಿದ್ದ ಮಹಾಲಿಂಗಂ ನಂತರ ಮನೆಗೆ ಮರಳದೇ ನಾಪತ್ತೆಯಾದ ಬಗ್ಗೆ ಅವರ ಪತ್ನಿ ವಿನಾಯಕ ಸುಂದರಿ ಮಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ನಂತರದಲ್ಲಿ ಮಹಾಲಿಂಗಂ ಅವರಿಗಾಗಿ ವ್ಯಾಪಕ ಹುಡುಕಾಟ ನಡೆದಿತ್ತು. ಪ್ರಮುಖ ಯೋಜನೆಯೊಂದರ ಉದ್ಯೋಗಿಯಾಗಿರುವ ಮಹಾಲಿಂಗಂ ಆರು ದಿನಗಳಾದರೂ ಪತ್ತೆಯಾಗದಿರುವುದು ದೇಶಾದ್ಯಂತ ತಲ್ಲಣ ಸೃಷ್ಟಿಸಿತ್ತು. ಇಡೀ ಪ್ರಕರಣ ಅನೇಕ ಉಹಾಪೋಹಗಳಿಗೆ ಕಾರಣವಾಗಿತ್ತು. ಅವರು ಅತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಇಲ್ಲವೇ ಅವರನ್ನು ಕೊಲೆ ಮಾಡಲಾಗಿದೆಯೇ ಅಥವಾ ಆಕಸ್ಮಿಕವಾಗಿ ನೀರಿಗೆ ಬಿದ್ದಿದ್ದಾರೆಯೇ ಎನ್ನುವ ಬಗ್ಗೆ ತಿಳಿದು ಬಂದಿಲ್ಲ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications