ಭಾರತೀಯ ವಿದ್ಯಾರ್ಥಿಗಳೇ ತಾಳ್ಮೆಯಿಂದಿರಿ:ಕೃಷ್ಣ

ಸೋಮವಾರ ಸಂಜೆ ಆಸ್ಟ್ರೇಲಿಯಾದ 20 ವರ್ಷದ ಯುವಕನೊಬ್ಬ ಮೂವರು ಭಾರತೀಯ ವಿದ್ಯಾರ್ಥಿಗಳಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಲ್ಲದೇ, ಕಪ್ಪು ಬಣ್ಣದ ಜನರೇ ನಮ್ಮ ದೇಶವನ್ನು ಬಿಟ್ಟು ಸ್ವದೇಶಕ್ಕೆ ತೆರಳಿ ಎಂದಿದ್ದಕ್ಕೆ ಕೋಪಗೊಂಡ ಭಾರತೀಯ ವಿದ್ಯಾರ್ಥಿಗಳು ಆತನ ಮೇಲೆ ಮಾರಣಾಂತಿಕ ದಾಳಿ ನಡೆಸಿ ಸೇಡು ತೀರಿಸಿಕೊಂಡಿದ್ದಾರೆ.
ಈ ಬೆಳವಣಿಗೆಯಿಂದ ಭಾರತ ಮತ್ತು ಆಸ್ಟ್ರೇಲಿಯಾ ವಿದ್ಯಾರ್ಥಿಗಳ ನಡುವೆ ಉಂಟಾಗಿರುವ ಮನಸ್ತಾಪ ಹೆಚ್ಚಾಗಲಿದೆ. ಭಾರತೀಯ ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಅಲ್ಲಿ ತೆರಳಿದ್ದು, ನಿಮ್ಮ ಅಭ್ಯಾಸದ ಕಡೆಗೆ ಗಮನ ಹರಿಸಬೇಕು ಎಂದು ಕೃಷ್ಣ ಸಲಹೆ ನೀಡಿದ್ದಾರೆ. ಆಸ್ಟ್ರೇಲಿಯನ್ನರ ಮೇಲೆ ದಾಳಿ ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
(ಏಜನ್ಸೀಸ್)











Click it and Unblock the Notifications