ಟ್ವೆಂಟಿ 20: ತುದಿಗಾಲಲ್ಲಿ ನಿಂತ ಧೋನಿ ಪಟಾಲಂ
ನಾಟಿಂಗ್ ಹ್ಯಾಮ್, ಜೂ.6: ಕಳೆದ ಬಾರಿಯ ಟ್ವೆಂಟಿ 20 ವಿಶ್ವಕಪ್ ಚಾಂಪಿಯನ್ ಭಾರತ ತಂಡ ಶನಿವಾರ ರಾತ್ರಿ 10.30ಕ್ಕೆ ನೆರೆಯ ಬಾಂಗ್ಲಾ ತಂಡದ ವಿರುದ್ಧ ಸೆಣಸಲಿದೆ. 2007ರ ವಿಶ್ವಕಪ್ ನಲ್ಲಿ ದುರ್ಬಲ ಬಾಂಗ್ಲಾ ವಿರುದ್ಧ ಭಾರತ ಹೀನಾಯ ಸೋಲುಂಡಿತ್ತು.
ಇತ್ತೀಚಿನ ಸಾಧನೆಗಳನ್ನು ಗಮನಕ್ಕೆ ತೆಗೆದುಕೊಂಡಿದ್ದೇ ಆದರೆ ಟ್ವೆಂಟಿ 20ಯಲ್ಲಿ ಭಾರತ ಬಲಿಷ್ಠ ತಂಡವೆನ್ನಿಸಿಕೊಂಡಿದೆ. ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಎಚ್ಚರಿಕೆಯಿಂದ ಆಡಬೇಕಾಗಿದೆ. ಪಾಕಿಸ್ತಾನದ ವಿರುದ್ಧ ನಡೆದ ಅಭ್ಯಾಸ ಪಂದ್ಯದಲ್ಲಿ ಭಾರತ ಉತ್ತಮ ಪ್ರದರ್ಶನ ತೋರಿತ್ತು. ಹಾಗಾಗಿ ಬಾಂಗ್ಲಾ ದೇಶಕ್ಕೆ ಶ್ರಮ ತಪ್ಪಿದ್ದಲ್ಲ. ಅದೃಷ್ಟ ಯಾರ ಕಡೆ ಒಲಿಯುತ್ತದೆ ಎಂಬುದು ನಿಖರವಾಗಿ ಹೇಳುವುದು ಕಷ್ಟ.
ಸುರೇಶ್ ರೈನಾ ಮತ್ತು ಯುವರಾಜ್ ಸಿಂಗ್ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಆಧಾರವಾಗಿದ್ದಾರೆ. ಧೋನಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿಯುತ್ತಿದ್ದು ಪಠಾಣ್ ಸಹೋದರರು ಮಿಂಚಿನ ರನ್ ಗಳಿಸಲು ಕಾತುರರಾಗಿದ್ದಾರೆ. ಸೆಹ್ವಾಗ್ ಭುಜದ ನೋವಿನಿಂದ ಬಳಲುತ್ತಿದ್ದು ಗೌತಮ್ ಗಂಭೀರ್ ಮತ್ತ್ತು ರೋಹಿತ್ ಶರ್ಮ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಹೆಚ್ಚಾಗಿದೆ.
ಮಳೆಯ ಕಣ್ಣಾಮುಚ್ಚಾಲೆ
ಶುಕ್ರವಾರ ರಾತ್ರಿ ನಾಟಿಂಗ್ ಹ್ಯಾಮ್ ನಲ್ಲಿ ಭಾರಿ ಮಳೆ ಸುರಿದಿದೆ. ಭಾರತ ಮತ್ತು ಬಾಂಗ್ಲಾ ನಡುವಿನ ಆಟಕ್ಕೆ ಮಳೆ ಅಡ್ಡಿಬರುವ ಸಾಧ್ಯತೆಯೂ ಇದೆ. ಅಲ್ಲಿನ ಕಾಲಮಾನ ಪ್ರಕಾರ ಸಂಜೆ 6ಗಂಟೆಗೆ(ಭಾರತ ಕಾಲಮಾನ ರಾತ್ರಿ 10.30) ಪಂದ್ಯ ಆರಂಭವಾಗುತ್ತದೆ. ಒಟ್ಟಿನಲ್ಲಿ ಮಳೆರಾಯ ತೊಂದರೆ ಕೊಡದಿದ್ದರೆ ಪಂದ್ಯವನ್ನು ಸವಿಯಬಹುದು.
(ದಟ್ಸ್ ಕನ್ನಡ ಕ್ರೀಡಾವಾರ್ತೆ)











Click it and Unblock the Notifications