ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪಗೆ ಮಂತ್ರಾಲಯ ಶ್ರೀಗಳ ಆಶೀರ್ವಾದ

By Staff
|
Google Oneindia Kannada News

Yeddyurappa
ರಾಯಚೂರು, ಮೇ. 29 : ಜನಪರ ಕಾಳದಿಯಿಂದ ರಾಜ್ಯದ ಏಳ್ಗೆಗೆ ಶ್ರಮಿಸುತ್ತಿದ್ದೀರಿ...... ರಾಯರು ಹಾಗೂ ಗುರುಗಳ ಆಶೀರ್ವಾದ ತಮಗೆ ಇದೆ. ನಿಮ್ಮ ಸರಕಾರ ಯಶಸ್ವಿ ಐದು ವರ್ಷ ಪೂರೈಸಲಿದೆ.... ನಿಶ್ಚಿಂತೆಯಿಂದಿರಿ.... ಮಂತ್ರಾಲಯ ಶ್ರೀ ರಾಘವೇಂದ್ರ ಮಠಕ್ಕೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಗುರುವಾರ ಭೇಟಿ ನೀಡಿದ ಸಂದರ್ಭದಲ್ಲಿ ಶ್ರೀಮಠದ ವತಿಯಿಂದ ಗೌರವಿಸಿದ ಪೀಠಾಧಿಪತಿ ಸುಯತೀಂದ್ರತೀರ್ಥ ಶ್ರೀಪಾದಂಗಳು ಆಶೀರ್ವದಿಸಿದ್ದು ಹೀಗೆ.

ಶ್ರೀಮಠದ ಭಕ್ತರಾಗಿ, ಸೇವಕರಾಗಿ ಕಾವು ಹಲವು ದಶಕಗಳಿಂದ ಹೊಂದಿದ ಬಾಂಧವ್ಯ, ಸಂಬಂಧದ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ವಿವರಿಸಿದರು. ತಮ್ಮ ಸರಕಾರ ಇದೇ 31 ಕ್ಕೆ ಒಂದು ವರ್ಷ ಪೂರೈಸಲಿದೆ. ಶ್ರೀಮಠದ ಆಶೀರ್ವಾದ ಕೋರಿದರು. ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಯಡಿಯೂರಪ್ಪ, ಜೂನ್ ಎರಡರಂದು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಭೇಟಿ ಮಾಡುಲಿದ್ದು, ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದಂತೆ
ಕೇಂದ್ರ ಸರಕಾರ ಸಂಪೂರ್ಣ ನೀಡಬೇಕು ಎಂದು ಮನವಿ ಮಾಡಿಕೊಳ್ಳುವುದಾಗಿ ಹೇಳಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X