ಪತ್ರಕರ್ತರೊಂದಿಗೆ ವರುಣ್ ಅಸಭ್ಯ ವರ್ತನೆ
ಪಿಲಿಭಿತ್, ಮೇ. 22 : ಲೋಕಸಭೆ ಚುನಾವಣೆಯ ಪ್ರಚಾರ ಕಾರ್ಯದಲ್ಲಿ ಅಲ್ಪಸಂಖ್ಯಾತರ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿ ವಿವಾದಕ್ಕೆ ಒಳಗಾಗಿದ್ದ ವರುಣ್ ಗಾಂಧಿ ಇದೀಗ ಪತ್ರಕರ್ತರೊಬ್ಬರ ಜೊತೆಗೆ ಅಸಭ್ಯವಾಗಿ ವರ್ತಿಸುವ ಮೂಲಕ ಮತ್ತೊಂದು ವಿವಾದವನ್ನು ಸೃಷ್ಟಿಸಿಕೊಂಡಿದ್ದಾರೆ.
ಚುನಾವಣೆಯಲ್ಲಿ ಆಯ್ಕೆಯಾದ ನಂತರ ವರುಣ್ ಗಾಂಧಿ ಪಿಲಿಭಿತ್ ಗೆ ಬಂದಿದ್ದರು. ಈ ವೇಳೆ ವರುಣ್ ಗೆ ಪಕ್ಷದ ಕಾರ್ಯಕರ್ತರು ಸ್ವಾಗತ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ವಾಹಿನಿಯೊಂದರ ಪರ್ತಕರ್ತರೊಬ್ಬರು ಕಾರ್ಯಕ್ರಮದ ಚಿತ್ರೀಕರಣ ಮಾಡಿಕೊಳ್ಳುತ್ತಿದ್ದರು. ಆಗ ಕ್ಯಾಮಕಾ ಮೇಲೆ ಹೂಮಾಲೆ ಎಸೆದು ಅಸಭ್ಯವಾಗಿ ವರ್ತಿಸಿದ ವರುಣ್, ಪೋಟೋ ತೆಗೆಯದಂತೆ ಸೂಚಿಸಿದರು. ಘಟನೆಯನ್ನು ಖಂಡಿಸಿ 30 ಮಂದಿ ಪತ್ರಕರ್ತರ ತಂಡ ಪಿಲಿಭಿತ್ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಅವರ ವಿರುದ್ದ ಶಿಸ್ತು ಕ್ರಮ ಜರುಗಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
(ಏಜನ್ಸೀಸ್)












Click it and Unblock the Notifications