ಮನಮೋಹನ್ ಸಿಂಗ್ ಇಂದು ರಾಷ್ಟ್ರಪತಿ ಭೇಟಿ

Manmohan Singh
ನವದೆಹಲಿ, ಮೇ. 20 : ಎರಡನೇ ಅವಧಿಗೆ ಪ್ರಧಾನಮಂತ್ರಿ ಆಗಲಿರುವ ಮನಮೋಹನ್ ಸಿಂಗ್ ಮತ್ತು ಯುಪಿಎ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರು ಕೇಂದ್ರದಲ್ಲಿ ಸರಕಾರ ರಚಿಸಲು ಬೇಕಿರುವ ಅಗತ್ಯ ಸಂಖ್ಯಾಬಲದ ಪತ್ರವನ್ನು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಗೆ ನೀಡಿ ನೂತನ ಸರಕಾರ ರಚಿಸಲು ಆಹ್ವಾನಿಸುವಂತೆ ಮನವಿ ಮಾಡಿಕೊಳ್ಳಲು ಬುಧವಾರ ಸಂಜೆ ರಾಷ್ಟ್ರಪತಿ ಭವನಕ್ಕೆ ತೆರಳಲಿದ್ದಾರೆ.

ಯುಪಿಎ ಅಂಗಪಕ್ಷಗಳಲ್ಲಿ 262 ಸ್ಥಾನಗಳಿವೆ. ಸರಕಾರ ರಚಿಸಲು ಬೇಕಿರುವುದು ಕೇವಲ 10 ಸ್ಥಾನಗಳು ಮಾತ್ರ. ಜೆಡಿಎಸ್ ನ ಮೂರು, ಅಸ್ಸಾಂ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್, ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್, ಬೋಡೋಲ್ಯಾಂಡ್ ಡೆಮಾಕ್ರಟಿಕ್ ಫ್ರಂಟ್ ನ ತಲಾ ಒಂದೊಂದು ಸಂಸದರು ಯುಪಿಎ ಬೆಂಬಲ ನೀಡಿದ್ದಾರೆ. ಅಲ್ಲದೇ 6 ಮಂದಿ ಪಕ್ಷೇತರ ಸಂಸದರು ಯುಪಿಎ ಸರಕಾರಕ್ಕೆ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ. ಅಲ್ಲಿಗೆ ಸರಕಾರ ರಚಿಸಲು ಬೇಕಿರುವ ಅಗತ್ಯ ಮ್ಯಾಜಿಕ್ ಸಂಖ್ಯೆ 272 ದಾಟಿದಂತಾಯಿತು.

ಇದಲ್ಲದೇ, ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷ ಹಾಗೂ ಲಾಲು ನೇತೃತ್ವದ ಆರ್ ಜೆಡಿ ಪಕ್ಷಗಳು ಸರಕಾರಕ್ಕೆ ಬೆಂಬಲ ನೀಡುತ್ತೇವೆ ಎಂದು ರಾಷ್ಟ್ರಪತಿಗಳಿಗೆ ಪತ್ರವನ್ನು ಸಲ್ಲಿಸಿವೆ. ಯುಪಿಎ ಸರಕಾರಕ್ಕೆ ಒಟ್ಟು 318 ಸಂಸದರ ಸಿಕ್ಕಂತಾಗಿದೆ. ಶುಕ್ರವಾರ ಮನಮೋಹನ್ ಸಿಂಗ್ ನೂತನ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಜೂನ್ 2 ಕ್ಕೆ ಹೊಸ ಸರಕಾರದ ಮೊದಲ ಅಧಿವೇಶನ ನಡೆಯುವ ಸಾಧ್ಯತೆಯಿದೆ.

(ಏಜನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+