ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂ.ದಕ್ಷಿಣದಲ್ಲಿ ಭೈರೇಗೌಡ ಅಚ್ಚರಿಯ ಮುನ್ನಡೆ

By Staff
|
Google Oneindia Kannada News

Krishna Byregowda
ಬೆಂಗಳೂರು, ಮೇ 16 : ಭಾರೀ ನಿರೀಕ್ಷೆಯ ಕ್ಷೇತ್ರವಾಗಿದ್ದ ಬೆಂಗಳೂರು ದಕ್ಷಿಣದಲ್ಲಿ ಪ್ರಥಮ ಬಾರಿ ಲೋಕಸಭೆಗೆ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ನ ಕೃಷ್ಣ ಭೈರೇಗೌಡ ಮತ್ತು ಭದ್ರಕೋಟೆಯಾಗಿಸಿಕೊಂಡಿದ್ದ ಬಿಜೆಪಿಯ ಅನಂತಕುಮಾರ್ ಅವರ ನಡುವೆ ತುರುಸಿನ ಸ್ಪರ್ಧೆ ಏರ್ಪಟ್ಟಿದೆ.

ಬೆಳಿಗ್ಗೆ 9.45ರ ಸುಮಾರಿಗೆ ಮೂರನೇ ಹಂತದ ಮತಎಣಿಕೆ ಮುಗಿದಾಗ ಅಚ್ಚರಿಯ ರೀತಿಯಲ್ಲಿ ಕೃಷ್ಣಭೈರೇಗೌಡ ಅವರು ಅನಂತಕುಮಾರ್ ಅವರಿಗಿಂತ 3 ಸಾವಿರ ಮತ ಮುನ್ನಡೆ ಸಾಧಿಸಿದ್ದಾರೆ. ಇಲ್ಲಿ ಅನಂತಕುಮಾರ್ 5ನೇ ಬಾರಿಗೆ ಸಂಸತ್ತಿಗೆ ಆಯ್ಕೆಯಾಗಲು ಸ್ಪರ್ಧಿಸುತ್ತಿದ್ದಾರೆ.

ಪ್ರಥಮ ಬಾರಿಗೆ ಕಣದಲ್ಲಿರುವ ಸ್ವತಂತ್ರ ಅಭ್ಯರ್ಥಿ ಕ್ಯಾಪ್ಟನ್ ಗೋಪಿನಾಥ್ ಕೇವಲ ಎರಡು ಸಾವಿರ ಮತ ಗಳಿಸಿದ್ದರೆ, ಜೆಡಿಎಸ್ ಅಭ್ಯರ್ಥಿ ಪ್ರೊ. ರಾಧಾಕೃಷ್ಣ ಐದು ಸಾವಿರ ಮತ ಗಳಿಸಿದ್ದಾರೆ. ವಾಟಾಳ್ ನಾಗರಾಜ್ ಲಿಸ್ಟಿನಲ್ಲಿಯೇ ಇಲ್ಲ.

(ದಟ್ಸ್ ಕನ್ನಡ ವಾರ್ತೆ)

ಮಹಾಚುನಾವಣೆ ಫಲಿತಾಂಶ : ಕ್ಷಣಕ್ಷಣದ ಸುದ್ದಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X