ಕುಮಾರ್-ಸೋನಿಯಾ ಭೇಟಿ : ಗೌಡ ಸ್ಪಷ್ಟನೆ

ಕುಮಾರಸ್ವಾಮಿ ಅವರು ಸೋನಿಯಾ ಗಾಂಧಿ ಭೇಟಿ ಮಾಡಿರುವುದಕ್ಕೆ ಸಂಬಂಧಿಸಿದಂತೆ ಬುಧವಾರ ದೇವೇಗೌಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಯುಪಿಎ ಬೆಂಬಲ ನೀಡುವ ವಿಷಯವನ್ನು ಸ್ಪಷ್ಟವಾಗಿ ತಳ್ಳಿಹಾಕದ ಗೌಡರು, ಯಾವುದನ್ನು ಸ್ಪಷ್ಟವಾಗಿ ಹೇಳಲಿಲ್ಲ. ಬರೀ ತೃತೀಯ ರಂಗಕ್ಕೆ ಯಾವುದೇ ಅಪಾಯವಿಲ್ಲ. ಹಾನಿಯಿಲ್ಲ, ಐಕ್ಯತೆಯಿಂದ ಕೂಡಿದೆ. ಬರೀ ಇಂಥ ಮಾತುಗಳನ್ನು ಆಡುತ್ತಾ ಹೋದರು. ರಾಜ್ಯದ ಮಾಜಿ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿರುವುದು ರಾಜ್ಯದ ಸಮಸ್ಯೆಗಳನ್ನು ಚರ್ಚಿಸಲು ಮಾತ್ರ ಎಂದು ಹೇಳುವ ಮೂಲಕ ಗೌಡರು ನುಣುಚಿಕೊಂಡರು.
ಬಿಜೆಪಿ ಮತ್ತು ಕಾಂಗ್ರೆಸ್ಸೆಯೇತರ ಸರಕಾರ ರಚಿಸುವುದು ತೃತೀಯ ರಂಗದ ಏಕೈಕ ಗುರಿ. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ರಾಜ್ಯದಲ್ಲಿ ದುರಾಡಳಿತ ನಡೆಸತೊಡಗಿದೆ. ಇದರಿಂದ ಜನತೆ ಬೇಸತ್ತು ಹೋಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಗೌಡರು, ರಾಜ್ಯದಲ್ಲಿರುವ ಕೋಮುವಾದಿ ಶಕ್ತಿಯನ್ನು ಕಿತ್ತೆಸೆಯುವುದಾಗಿ ಗುಡುಗಿದರು.
ಮೇ 18 ರಂದು ತೃತೀಯ ರಂಗದ ಸಭೆ
ಕುಮಾರಸ್ವಾಮಿ ಅವರು ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ ಹಿನ್ನೆಲೆಯಲ್ಲಿ ತೃತೀಯ ರಂಗದಲ್ಲಿ ಸಂಚಲನ ಉಂಟಾಗಿದ್ದು, ದೇವೇಗೌಡರನ್ನು ಪ್ರಾಮಾಣಿಕತೆಯನ್ನು ಎಡಪಕ್ಷಗಳ ಮುಖಂಡರು ಪ್ರಶ್ನಿಸುವಂತಾಗಿದೆ. ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಮಾತನಾಡಿ, ದೇವೇಗೌಡ ತೃತೀಯ ರಂಗದಲ್ಲಿರುವುದನ್ನು ಖಾತ್ರಿಪಡಿಸಿದ್ದಾರೆ. ಯುಪಿಎ ಸರಕಾರಕ್ಕೆ ಬೆಂಬಲ ನೀಡುವ ಮಾತೇ ಇಲ್ಲ. ಬಿಜೆಪಿ ಮತ್ತು ಕಾಂಗ್ರೆಸ್ಸೆಯೇತರ ಸರಕಾರಕ್ಕೆ ರಚಿಸಲು ಶಕ್ತಿಮೀರಿ ಪ್ರಯತ್ನ ನಡೆಸಲಾಗುವುದು ಎಂದರು.
(ದಟ್ಸ್ ಕನ್ನಡ ವಾರ್ತೆ)
ಯುಪಿಎಗೆ ಬೆಂಬಲ : ಕುಮಾರಣ್ಣ ಕೇಂದ್ರ ಮಂತ್ರಿ ?












Click it and Unblock the Notifications