ಚಿದು ಮಗನ ಮೇಲೆ ಎಐಎಡಿಎಂಕೆ ದಾಳಿ
ಚೆನ್ನೈ, ಮೇ. 13 : ಮಂಗಳವಾರ ರಾತ್ರಿ ಶಿವಗಂಗಾ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪಿ ಚಿದಂಬರಂ ಅವರ ಮಗ ಕಾರ್ತಿ ಚಿದಂಬರಂ ಅವರ ಕಾರ್ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ಅವರ ಮೇಲೆ ನಡೆಸಿರುವ ಘಟನೆ ನಡೆದಿದೆ. ಎಐಎಡಿಎಂಕೆ ಕಾರ್ಯಕರ್ತರು ಈ ಕೃತ್ಯ ಎಸಗಿದ್ದಾರೆ ಎಂದು ಕಾಂಗ್ರೆಸ್ ಪಕ್ಷ ಆರೋಪಿಸಿದೆ.
ಮನಮದುರೈನಲ್ಲಿ ಏರ್ಪಡಿಸಲಾಗಿದ್ದ ಚುನಾವಣೆ ಪ್ರಚಾರ ಕಾರ್ಯ ಮುಗಿಸಿಕೊಂಡು ಪಕ್ಷದ ಕಾರ್ಯಕರ್ತರೊಂದಿಗೆ ಕಾರ್ತಿ ಚಿದಂಬರಂ ಅವರು ತಿರುಪವನಮ್ ಗೆ ತೆರಳುತ್ತಿದ್ದ ಸಮಯದಲ್ಲಿ ಈ ಘಟನೆ ನಡೆದಿದೆ. ಕಾರ್ತಿ ಅವರ ಕಾರ್ ಗೆ ಅಡ್ಡನಿಂತು ಕಾರ್ಯಕರ್ತರು ಕಾರಿನಲ್ಲಿದ್ದರನ್ನು ಕೆಳಗಿಸಿದ್ದಾರೆ. ಅಲ್ಲದೇ ಮತದಾರರಿಗೆ ಹಣ ಹಂಚುತ್ತಿದ್ದಾರೆ ಎಂದು ಆರೋಪಿಸಿದ ಅವರು, ಕಾರ್ತಿ ಅವರ ಕಾರಿನ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಘಟನೆಯಲ್ಲಿ ಕಾರ್ತಿ ಅವರ ಕಾರ್ ಚಾಲಕ ಶರವಣ್ ಗಾಯಗೊಂಡಿದ್ದಾರೆ. ಕಾರಿನ ಕಿಡಕಿ ಗಾಜುಗಳು ಒಡೆದಿವೆ ಎಂದು ಪೊಲೀಸರು ತಿಳಿಸಿದ್ದಾರೆ.
(ಏಜನ್ಸೀಸ್)
ಮತದಾನ ಮಾಡದ ಕಮಲ್ ಹಾಸನ್












Click it and Unblock the Notifications