ಕೇಂದ್ರದ ಸಂಪುಟ ಸಭೆಗೆ ಲಾಲು ಗೈರು

ಮಾಧ್ಯಮದ ಸ್ನೇಹಿತರೆಂದೇ ಹೆಸರಾಗಿದ್ದ ಲಾಲು ಇತ್ತೀಚೆಗೆ ಪತ್ರಕರ್ತರು ಕಂಡರೆ ಕೆಂಡಕಾರುತ್ತಿದ್ದಾರೆ. ನಡೆದ ನಾಲ್ಕನೇ ಹಂತದ ಮತದಾನದ ವೇಳೆಯಲ್ಲಿ ಕೂಡಾ ಅದೇ ನಡೆಯಿತು. ಪಾಟಲೀಪುತ್ರ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿರುವ ಲಾಲು ಗುರುವಾರ ತಮ್ಮ ಕುಟುಂಬ ಸಮೇತ ಮತ ಹಾಕಲು ಬಂದಾಗ ಕ್ಯಾಮೆರಾಮನ್ ನನ್ನು ನೋಡಿದ ಲಾಲು ವ್ಯಘ್ರರಾಗಿದ್ದಾರೆ. ಕೋಪದಿಂದ ಕೂಗಾಡಿದ ಅವರು, ಅವರನ್ನು ಹೊರಹಾಕಿ ಎಂದು ಆದೇಶ ನೀಡಿದ್ದಾರೆ. ನಂತರ ತಾವೇ ಹೋಗಿ ಕ್ಯಾಮರಾಮನ್ ನನ್ನು ಹೊರದಬ್ಬಿರುವ ಪ್ರಸಂಗವೂ ನಡೆದಿದೆ.
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಆರ್ ಜೆಡಿ ಜೊತೆಗೆ ಕೈಜೋಡಿಸದಿರುವುದು. ತಮ್ಮ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದು. ನಂತರ ರಾಹುಲ್ ಗಾಂಧಿ ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಹೊಗಳಿರುವುದು ಲಾಲು ಅವರಿಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಎಲ್ಲ ಅಂಶಗಳು ಇಂದಿನ ಸಂಪುಟ ಸಭೆಗೆ ಗೈರು ಹಾಜರಾಗಲು ಕಾರಣವಾಗಿದೆ.
(ಏಜನ್ಸೀಸ್)
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು












Click it and Unblock the Notifications