ಮಧುಗಿರಿ ಬಿಟ್ಟು ಹೋಗಲಾರೆ: ಅನಿತಾ

ಆಲಿಕಲ್ಲು ಮಳೆ ಹಾಗು ಬಿರುಗಾಳಿಗೆ ಬೆಳೆ ಹಾನಿಗೊಳಗಾದ ಕಸಬ ಹೋಬಳಿಯ ಗುಂಡ್ಲುಹಳ್ಳಿ, ಆಚೀನಹಳ್ಳಿ ಮುಂತಾದ ಗ್ರಾಮಗಳಿಗೆ ಭೇಟಿ ನೀಡಿ ನಷ್ಟಕ್ಕೊಳಗಾದ ರೈತರಿಗೆ ಸಾಂತ್ವನ ಹೇಳಲು ಬಂದಿದ್ದ ಅನಿತಾ, ಮಣ್ಣಿನ ಮಕ್ಕಳೆಂದು, ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿ ಮಾಧ್ಯಮಗಳಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಾರೆ. ಮಳೆಯಿಂದಾಗಿ ಬೆಳೆಹಾನಿಯಾಗಿ ಮೂರು ದಿನ ಕಳೆದರೂ ರೈತರ ಕೂಗು ನಿಮಗೆ ಕೇಳಿಸಲಿಲ್ಲವೇ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ತರಾಟೆಗೆ ತೆಗೆದುಕೊಂಡರು.
ಕಂದಾಯ ಇಲಾಖೆಯ ಪರಿಮಿತಿಯಲ್ಲಿ ಎಕರೆಗೆ 800 ರುಪಾಯಿ ಪರಿಹಾರ ನೀಡಲು ಸಾಧ್ಯವಿದೆ. 356 ಸಂತ್ರಸ್ತ ರೈತರ 650 ಎಕರೆ ಪ್ರದೇಶಕ್ಕೆ ಹಣ ವಿತರಿಸಿದರೆ ರಾವಣ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ನೀಡಿದಂತಾಗುತ್ತದೆ. ಈ ಘಟನೆಯನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಹೆಚ್ಚುವರಿ ಹಣವನ್ನು ಪ್ಯಾಕೇಜ್ ರೂಪದಲ್ಲಿ ಬಿಡುಗಡೆ ಮಾಡಿ ಎಂದು ಸರಕಾರವನ್ನು ಒತ್ತಾಯಿಸಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications