ಬಿಜೆಪಿ ರಾಜಕೀಯ ವ್ಯಭಿಚಾರ ನಡೆಸುತ್ತಿದೆ:ದೇವೇಗೌಡ

H D Devegowda
ಬೆಂಗಳೂರು, ಏ.11 : ಜೆಡಿಎಸ್ ಬಡವರ ಹಾಗೂ ಅಲ್ಪಸಂಖ್ಯಾತರ ಪರವಾಗಿರುವ ಪಕ್ಷ. ರಾಜ್ಯದಲ್ಲಿ ಜೆಡಿಎಸ್ ಭವಿಷ್ಯ ನಿರ್ಧರಿಸಬೇಕಾದವರು ಮತದಾರರೇ ಹೊರತು ಯಡಿಯೂರಪ್ಪ ಅಲ್ಲ. ಅವರು ಪೊಳ್ಳು ಮಾತುಗಳಿಗೆ ಜನಮನ್ನಣೆ ನೀಡುವುದಿಲ್ಲ ಎಂದು ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಗುಡುಗಿದರು.

ಉದಯವಾಣಿ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಅವರು ಅಪರೇಷನ್ ಕಮಲಕ್ಕೆ ಕುರಿತು ಈ ರೀತಿ ಉತ್ತರಿಸಿದರು. ರಾಜ್ಯದಲ್ಲಿ ನಡೆದಿರುವುದು ರಾಜಕೀಯ ಧ್ರುವೀಕರಣವಲ್ಲ. ಅದೊಂದು ರಾಜಕೀಯ ವ್ಯಭಿಚಾರ, ಯಾವುದೇ ರಾಜ್ಯದಲ್ಲಿಯೂ ಇಂತಹ ವ್ಯಭಿಚಾರದ ರಾಜಕೀಯ ನಡೆದಿಲ್ಲ. ನನ್ನ ಜೀವನದಲ್ಲಿ ಎಂದೂ ಕಂಡಿಲ್ಲ ಎಂದು ಗೌಡರು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯದ ಜನತೆ 15-16 ಸ್ಥಾನಗಳನ್ನು ಗೆಲ್ಲಿಸಿಕೊಡಲಿ, ಯಾರೇ ಪ್ರಧಾನಿಯಾದರೂ ರಾಜ್ಯದ ಅಭಿವೃದ್ದಿಗೆ ಹಣವನ್ನು ಹೇಗೆ ತರಬೇಕು ಎಂಬುದನ್ನು ತೋರಿಸುತ್ತೇನೆ. ತೃತೀಯ ರಂಗ ದಿನೆದಿನೇ ಬಲಾಢ್ಯವಾಗುತ್ತಿರುವುದರಿಂದ ಹತಾಶಗೊಂಡಿರುವ ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ತಮ್ಮ ತಮ್ಮ ಪಕ್ಷಗಳ ಪರಿಸ್ಥಿತಿ ಏನಾಗಿದೆ ಎಂಬುದನ್ನು ಮೊದಲು ನೋಡಿಕೊಳ್ಳಲಿ ಎಂದು ಗೌಡರು ಹರಿಹಾಯ್ದರು.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+