Get Updates
Get notified of breaking news, exclusive insights, and must-see stories!

ಏಪ್ರಿಲ್ 9 ರಂದು ಬೆಂಗಳೂರು ಕರಗ

Karaga festival
ಬೆಂಗಳೂರು,ಏ.5: ನಗರದ ಧರ್ಮರಾಯಸ್ವಾಮಿಯ ಕರಗ ಶಕ್ತ್ಯೋತ್ಸವ ಮತ್ತು ಶ್ರೀ ಧರ್ಮರಾಯಸ್ವಾಮಿ ಮಹಾ ರಥೋತ್ಸವ ಏಪ್ರಿಲ್ 9 ರಂದು ವಿಜೃಂಭಣೆಯಿಂದದ ನಡೆಯಲಿದೆ. ಕರಗ ಶಕ್ತ್ಯೋತ್ಸವ ಅಂದು ರಾತ್ರಿ 12 ಗಂಟೆಗೆ ನಗರದ ತಿಗಳರಪೇಟೆಯಲ್ಲಿರುವ ಶ್ರೀ ಧರ್ಮರಾಯಸ್ವಾಮಿ ದೇವಾಲಯದಿಂದ ಪ್ರಾರಂಭವಾಗಿ ಪ್ರಮುಖ ರಸ್ತೆಗಳ ಮೂಲಕ ವಿವಿಧ ದೇವಸ್ಥಾನಗಳು ಮತ್ತು ಮಸ್ತಾನ್ ಸಾಹೇಬ್ ದರ್ಗಾದಲ್ಲಿ ಪೂಜೆ ಸ್ವೀಕರಿಸಿ ಏ.10 ರಂದು ಬೆಳಿಗ್ಗೆ 6ಗಂಟೆಗೆ ಹಿಂದಿರುಗಲಿದೆ.

ಏಪ್ರಿಲ್ 6 ರಂದು ರಾತ್ರಿ 3.00 ಗಂಟೆಗೆ ಮಹಿಳೆಯರು ದ್ರೌಪದಿ ದೇವಿಗೆ ಆರತಿ ದೀಪವನ್ನು ಬೆಳಗುವರು. ಏಪ್ರಿಲ್ 7 ರಂದು ರಾತ್ರಿ 3.00ಗಂಟೆಗೆ ಸಂಪಿಗೆ ಕೆರೆಅಂಗಳದಲ್ಲಿರುವ ಶಕ್ತಿ ಪೀಠದಲ್ಲಿ ಹಸಿ ಕರಗ ನಡೆಯಲಿದೆ.

ಕರಗ ಮಹೋತ್ಸವ ಸಂದರ್ಭದಲ್ಲಿ ಗಂಧೂಡಿ, ಅರಿಶಿನಪುಡಿ, ಕುಂಕುಮ, ಕಲ್ಯಾಣ ಸೇವೆ, ಬಾಳೆಹಣ್ಣ, ಧವಣ ಮುಂತಾದ ಪೂಜಾ ದ್ರವ್ಯಗಳನ್ನು ಕರಗಕ್ಕೆ ಅರ್ಪಿಸಬಾರದೆಂದು, ಬಿಡಿ ಮಲ್ಲಿಗೆ ಹೂಗಳನ್ನು ಮಾತ್ರ ಉಪಯೋಗಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಧರ್ಮರಾಯಸ್ವಾಮಿ ದೇವಾಲಯದ ವ್ಯವಸ್ಥಾಪಕ ಸಮಿತಿ ಭಕ್ತಾಧಿಗಳಲ್ಲಿ ಮನವಿ ಮಾಡಿದೆ.

(ದಟ್ಸ್ ಕನ್ನಡ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+