ಲಾಲು, ಮುಲಾಯಂ ಪಾಸ್ವಾನ್ ನೇತೃತ್ವದ 4ನೇ ರಂಗ
ನವದೆಹಲಿ, ಏ. 3 : ಕಾಂಗ್ರೆಸ್ ನೇತೃತ್ವದ ಯುಪಿಎ, ಬಿಜೆಪಿ ನೇತೃತ್ವದ ಎನ್ ಡಿಎ, ಎಡಪಕ್ಷಗಳ ನೇತೃತ್ವ ತೃತೀಯ ರಂಗ ಸಕ್ರಿಯವಾಗಿರುವ ಬೆನ್ನಲ್ಲೇ ಇನ್ನೊಂದು ರಂಗ ಇಂದು ಉದಯವಾಗಿದೆ. ಲಾಲು ಪ್ರಸಾದ ಯಾದವ್ ಅವರ ರಾಷ್ಟ್ರೀಯ ಜನತಾ ದಳ, ಮುಲಾಯಂ ಸಿಂಗ್ ಯಾದವ್ ಅವರ ಸಮಾಜವಾದಿ ಪಕ್ಷ ಹಾಗೂ ರಾಂ ವಿಲಾಸ್ ಪಾಸ್ವಾನ್ ನೇತೃತ್ವದ ಲೋಕಜನಶಕ್ತಿ ಪಕ್ಷ ಒಂದುಗೂಡಿ ಜಾತ್ಯಾತೀತ ರಂಗ ಎಂಬ ನೂತನ ಒಕ್ಕೂಟವನ್ನು ಹುಟ್ಟುಹಾಕಿದ್ದಾರೆ.
ಜಾತ್ಯಾತೀತ ರಂಗ ಯುಪಿಎ ರಂಗದ ವಿರೋಧಿಯಲ್ಲ ಎಂದು ಈ ಮೂವರು ನಾಯಕರು ಸ್ಪಷ್ಟಪಡಿಸಿದ್ದಾರೆ. ಮುಂದಿನ ದಿನಗಳಲ್ಲಿಯೂ ಯುಪಿಎ ರಂಗದೊಂದಿಗೆ ಉತ್ತಮ ಬಾಂಧವ್ಯ ಮುಂದುವರಿಸಿಕೊಂಡು ಹೋಗಲಾಗುವುದು ಎಂದಿದ್ದಾರೆ. ಜಾತ್ಯಾತೀತ ರಂಗದ ಪ್ರಧಾನಮಂತ್ರಿ ಅಭ್ಯರ್ಥಿಯನ್ನು ಘೋಷಿಸಿದ್ದು. ಈ ರಂಗ ಕೂಡಾ ಮನಮೋಹನ್ ಸಿಂಗ್ ಅವರನ್ನೇ ಪ್ರಧಾನಮಂತ್ರಿ ಹುದ್ದೆ ಅಭ್ಯರ್ಥಿ ಎಂದು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದೆ.
ಕೋಮುವಾದಿಗಳನ್ನು ಅಧಿಕಾರದಿಂದ ದೂರವಿಡುವ ಸಲುವಾಗಿ ಜಾತ್ಯಾತೀತ ರಂಗವನ್ನು ಹುಟ್ಟಹಾಕಲಾಗಿದೆ. ಈ ರಂಗ ಮುಂದಿನ ದಿನಗಳಲ್ಲಿ ಬಡವರು, ಶೋಷಿತರ ಏಳಿಗೆಗಾಗಿ ಹೋರಾಟ ಮುಂದುವರೆಸಲಿದೆ ಎಂದು ಎಸ್ಪಿ ನಾಯಕ ಮುಲಾಯಂ ಸಿಂಗ್ ಯಾದವ್ ಹೇಳಿದರು.
(ದಟ್ಸ್ ಕನ್ನಡ ವಾರ್ತೆ)
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು











Click it and Unblock the Notifications