ಐವರು ಧನದಾಹಿಗಳು ಬಲೆಗೆ, 6 ಕೋಟಿ ವಶ
ಬೆಂಗಳೂರು, ಏ. 3 : ರಾಜ್ಯದಲ್ಲಿ ಚುನಾವಣೆ ಕಾವು ಏರುತ್ತಿರುವ ಬೆನ್ನಲ್ಲೇ ಲೋಕಾಯುಕ್ತ ಪೊಲೀಸರು ಇಂದು ವಿವಿಧ ಜಿಲ್ಲೆಗಳ ಐದು ಭ್ರಷ್ಟ ಅಧಿಕಾರಿಗಳ ಮನೆ ಹಾಗೂ ಕಚೇರಿ ದಾಳಿ ನಡೆಸಿ ಸುಮಾರು 6 ಕೋಟಿಗಿಂತ ಅಧಿಕ ಅಕ್ರಮ ಅಸ್ತಿ, ಹಣ ಮತ್ತು ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಉಪಲೋಕಾಯುಕ್ತ ಪತ್ರಿ ಬಸವನಗೌಡ ತಿಳಿಸಿದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಹಾಯಕ ಇಂಜಿನಿಯರ್ ಮಾರ್ತಾಂಡಪ್ಪ, ಬೆಂಗಳೂರು ದಕ್ಷಿಣ ಜಿಲ್ಲಾ ಪಂಚಾಯತ್ ಕಿರಿಯ ಇಂಜಿನಿಯರ್ ಬಿ ಎಸ್ ಹನುಮಂತಗೌಡ, ಗದಗನ ಎಪಿಎಂಸಿ ಸಹಾಯ ನಿರ್ದೇಶಕ ಪುಟ್ಟರಾಜು ಹಾಗೂ ಗುಲ್ಬರ್ಗಾ ನಗರ ಪಾಲಿಕೆ ದ್ವಿತೀಯ ದರ್ಜೆ ಗುಮಾಸ್ತ ಹನುಮಂತ ಲಿಂಗ್ಟಿ, ದಕ್ಷಿಣ ಕನ್ನಡ ಜಿಲ್ಲೆ ಕಾಪುವಿನ ಕುಂದಾಪುರ ಅರಣ್ಯ ವಿಭಾಗದ ಅರಣ್ಯಾಧಿಕಾರಿ ಅಬ್ಧುಲ್ ಅಜೀಜ್ ಲೋಕಾಯುಕ್ತ ಬಲೆ ಸಿಕ್ಕಿ ಬಿದ್ದ ಧನದಾಹಿಗಳಾಗಿದ್ದಾರೆ.
ಇಂದು ಬೆಳಗ್ಗೆ ಏಕಕಾಲದಲ್ಲಿ ಭ್ರಷ್ಟ ಅಧಿಕಾರಿಗಳ ಮನೆ. ಕಚೇರಿ ಮೇಲೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಅಕ್ರಮ ಸಂಪಾದನೆಯ ಆಸ್ತಿ ಪಾಸ್ತಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಭ್ರಷ್ಟರಿಂದ ಒಟ್ಟು 6 ಕೋಟಿಗಿಂತ ಅಧಿಕ ಅಕ್ರಮ ಸಂಪತ್ತು ವಶಪಡಿಸಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications