ಬಳ್ಳಾರಿಯಲ್ಲಿ ಸೇನಾಪಡೆ ನಿಯೋಜಿಸಿ: ದೇಶಪಾಂಡೆ

ಬೆಂಗಳೂರಿನಲ್ಲಿ ಮಾದ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಳ್ಳಾರಿಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ ಎಂದರು. ಬಳ್ಳಾರಿ ಗಣಿದಣಿಗಳಿಂದ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದು ಹೋಗಿದೆ. ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಬಳ್ಳಾರಿಯಲ್ಲೇ ಹೆಚ್ಚಾಗಿದು ಇದಕ್ಕೆ ಪುಷ್ಟಿ ನೀಡುತ್ತವೆ ಎಂದು ದೇಶಪಾಂಡೆ ಹೇಳಿದರು. ಮತದಾರ ಒಲಿಸಿಕೊಳ್ಳುವ ಸಲುವಾಗಿ ಆಡಳಿತ ಬಿಜೆಪಿ ಪಕ್ಷ ಹಾಗೂ ಅಲ್ಲಿ ಸಚಿವರು ಕಪ್ಪು ಹಣವನ್ನು ನೀರಿನಂತೆ ಸುರಿಯುತ್ತಿದ್ದಾರೆ ಎಂದು ಆರೋಪಿಸಿ ದೇಶಪಾಂಡೆ, ಇದನ್ನೆಲ್ಲಾ ನೊಡಿಕೊಂಡು ಆಯೋಗ ಸುಮ್ಮನೆ ಕುಳಿತಿರುವುದು ಏಕೆ ಎಂದು ಪ್ರಶ್ನಿಸಿದರು.
ಬಿಜೆಪಿ ಇದೀಗ ಬಿಜೆಸಿ (ಭಾರತೀಯ ಜನತಾ ದಳ ಕಾಂಗ್ರೆಸ್) ಆಗಿದೆ ಎಂದು ಲೇವಡಿ ಮಾಡಿದ ಅವರು, ಜೆಡಿಎಸ್, ಮತ್ತು ಕಾಂಗ್ರೆಸ್ ಪಕ್ಷದ ಕೆಲ ನಾಯಕರನ್ನು ಆಪರೇಶನ್ ಕಮಲದ ಮೂಲಕ ಸೆಳೆದುಕೊಂಡು ಕಣಕ್ಕೆ ಇಳಿಸಿದೆ. ಇದರಲ್ಲಿ ಬಿಜೆಪಿ ಸಫಲ ಆಗುವುದು ಅಸಾಧ್ಯ. ಪ್ರಜ್ಞಾವಂತ ಮತದಾರರು ಇಂಥ ಪಕ್ಷಾಂತರಿಗಳನ್ನು ಆಯ್ಕೆ ಮಾಡುವುದಿಲ್ಲ ಎಂದು ದೇಶಪಾಂಡೆ ಭವಿಷ್ಯ ನುಡಿದರು.
(ದಟ್ಸ್ ಕನ್ನಡ ವಾರ್ತೆ)
ಬಳ್ಳಾರಿ ಲೋಕಸಬೆ ಚುನಾವಣೆ ಮುಂದೂಡಿಕೆ ?
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು












Click it and Unblock the Notifications