ಪ್ರಧಾನಿಯಾಗುವ ಅರ್ಹತೆ ಅಡ್ವಾಣಿಗಿಲ್ಲ, ಡಿಕೆಶಿ
ಉಡುಪಿ, ಏ. 3 : ಮಹಮ್ಮದ್ ಆಲಿ ಪರ ಹೇಳಿಕೆ ನೀಡಿದ್ದಕ್ಕಾಗಿ ಬಿಜೆಪಿ ಅಧ್ಯಕ್ಷ ಸ್ಥಾನ ಕಳೆದುಕೊಂಡ ಎಲ್ ಕೆ ಆಡ್ವಾಣಿಯವರನ್ನು ನಾವು ಪ್ರಧಾನಿ ಎಂದು ಒಪ್ಪಬೇಕೇ ? ಪಕ್ಷದ ಅಧ್ಯಕ್ಷರಾಗಲು ನಾಲಾಯಕ್ ಆದ ಅವರು ಈ ದೇಶದ ಪ್ರಧಾನಮಂತ್ರಿಯಾಗುವ ಅರ್ಹತೆ ಇದೆಯೇ ಎಂದು ರಾಜ್ಯ ಕಾಂಗ್ರೆಸ್ ಕಾರ್ಯಾದ್ಯಕ್ಷ ಡಿ ಕೆ ಶಿವಕುಮಾರ್ ಲೇವಡಿ ಮಾಡಿದ್ದಾರೆ.
ಬೈ೦ದೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಿವಕುಮಾರ್, ಬ್ಯಾಲಟ್, ಬುಲೆಟ್ ಗಿಂತ ಶಕ್ತಿಶಾಲಿ ಎಂದು ತಿಳಿಯಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ 20 ಸೀಟ್ ಕೊಡಿ, ರಾಜ್ಯದಲ್ಲಿ ಬಿಜೆಪಿಯನ್ನು ಬೇರು ಸಹಿತ ಕಿತ್ತೆಸೆಯುತ್ತೇವೆ ಎಂದು ಗುಡುಗಿದರು. ಪಕ್ಷ ತೊರೆದು ಬಿಜೆಪಿ ಸೇರಿಕೊಂಡಿರುವ ಡಿ ಬಿ ಚಂದ್ರೇಗೌಡ ಅವರಿಗೆ ಪಕ್ಷದಲ್ಲಿ ಸಾಕಷ್ಟು ಅವಕಾಶ ನೀಡಲಾಗಿತ್ತು. ಆದರೆ, ಇತ್ತೀಚಿಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅವರು ಸೋತಿದ್ದರು. ಇಷ್ಟಾದರೂ ಪಕ್ಷ ಅವರನ್ನು ಕಡೆಗಣಿಸಿರಲಿಲ್ಲ. ಈಗ ಬಿಜೆಪಿ ಸೇರಿರುವ ಅವರಿಗೆ ಆ ಪಕ್ಷದಲ್ಲಿ ಭವಿಷ್ಯವಿಲ್ಲ ಎಂದು ಹೇಳಿದರು.
ಮಾಜಿ ಸಚಿವ ಕುಮಾರ್ ಬಂಗಾರಪ್ಪ ಮಾತನಾಡಿ, ರಾಮನ ಹೆಸರಿನಲ್ಲಿ ಬಿಜೆಪಿ ಯುವಕರ ದಾರಿ ತಪ್ಪಿಸುತ್ತಿದೆ. ಆಡ್ವಾಣಿ, ಮೋದಿ, ವರುಣ್ ಗಾಂಧಿ ಈ ದೇಶದ ಯುವಕರಿಗೆ ಆದರ್ಶವಾಗಬಾರದು ಬದಲಿಗೆ ಮಹಾತ್ಮಾ ಗಾಂಧಿ, ವಿವೇಕಾನಂದ, ಡಾ. ರಾಜಕುಮಾರ್, ಬಂಗಾರಪ್ಪ ಮುಂತಾದ ಮುತ್ಸದ್ದಿಗಳು ಆದರ್ಶವಾಗಬೇಕು ಎಂದು ಹೇಳಿದರು.
(ದಟ್ಸ್ ಕನ್ನಡ ವಾರ್ತೆ)
ಅಡ್ವಾಣಿ ಪ್ರಧಾನಮಂತ್ರಿ ಆಗೋದು ಗ್ಯಾರಂಟಿ
ಲೋಕಸಭೆ ಚುನಾವಣೆ, ಇಂಡಿಯಾ ಟುಡೇ ಸಮೀಕ್ಷೆ
ಲೋಕಸಭೆ ಚುನಾವಣೆ 2009 ತಾಜಾ ಸುದ್ದಿಗಳು











Click it and Unblock the Notifications