ಡೆಂಟಿಸ್ಟ್ ಕೆಲಸಕ್ಕಿಂತ ಬಿಪಿಓ ಕೆಲಸವೇ ಬೆಸ್ಟ್!
ಬೆಂಗಳೂರು, ಏ. 2 : ಕೆಲಸ ಯಾವುದಾದರೇನು ಬಾಳು ಮುಖ್ಯ. ಪುಡಿಗಾಸು ಸಿಗುವ ಡಿಗ್ರಿ ಮುಗಿಸಿದ ಕ್ಷೇತ್ರದಲ್ಲೇ ಯಾವೋನು ಕೆಲಸ ಮಾಡ್ತಾನೆ, ಹೊಟ್ಟೆ ತುಂಬುವಂಥ ಕೆಲಸ ಸಿಕ್ರೆ ಸಾಕು. ಡಿಗ್ರಿಗಷ್ಟು ಬೆಂಕಿಹಾಕಾ ಎನ್ನುವಂಥ ಪರಿಸ್ಥಿತಿ ಅನೇಕ ಕ್ಷೇತ್ರಗಳಲ್ಲಿ ಎದುರಾಗಿದೆ.
ಕಂಪ್ಯೂಟರ್ ಸೈನ್ಸೋ ಇನ್ನಾವುದರಲ್ಲಿಯೋ ಕೆಲಸ ಮುಗಿಸಿ ಕೆಲಸಕ್ಕೆ ಅರಸುತ್ತಿರುವವರು ಎಚ್ಟಿಎಂಎಲ್ ಆಪರೇಟರ್, ಡೇಟಾ ಎಂಟ್ರಿ ಆಪರೇಟರ್ ಕೆಲಸಕ್ಕೂ ಅರ್ಜಿ ಹಾಕುತ್ತಿದ್ದಾರೆ. ಇಂಥದೇ ಪರಿಸ್ಥಿತಿಯನ್ನು ಹಲ್ಲಿನ ವೈದ್ಯರೂ ಇಲ್ಲಿ ಎದುರಿಸುತ್ತಿದ್ದಾರೆ. ರಿಪೇರಿಗೆ ಬಂದ ಹಲ್ಲುಗಳನ್ನು ದುರುಸ್ತಿ ಮಾಡುವುದು ಅವರಿಗೆ ಬೇಜಾರಾಗಿದೆ ಎಂದಲ್ಲ. ಆ ಕೆಲಸದಲ್ಲಿ ಸಿಗುತ್ತಿರುವ ಪುಡಿಗಾಸು ಅವರಿಗೆ ಯಾತಕ್ಕೂ ಸಾಕಾಗುತ್ತಿಲ್ಲ.
ಅನೇಕ ದಂತ ವೈದ್ಯರು ಡೆಂಟಿಸ್ಟ್ ಕೆಲಸ ಬಿಟ್ಟು ಬಿಪಿಓ ಕ್ಷೇತ್ರದಲ್ಲಿ ಕೆಲಸ ಅರಸುತ್ತಿದ್ದಾರೆ. ಅಲ್ಲಿ ಕೂಡ ಇಂಥದೇ ಕೆಲಸವಾಗಬೇಕೆಂದೇನಿಲ್ಲ. ಮೆಡಿಕಲ್ ಟ್ರಾನ್ಸ್ಕ್ರಿಪ್ಶನಿಸ್ಟ್, ಬೋಧನೆ ಮತ್ತು ಆರೋಗ್ಯ ವಿಮೆ ಕ್ಷೇತ್ರಗಳಲ್ಲಿಯೂ ಜೀವನಾಧಾರಕ್ಕೆ ದುಡಿಯುತ್ತಿದ್ದಾರೆ. ಈ ಕೆಲಸಗಳಲ್ಲಿ ವೃತ್ತಿಸುಖವಿಲ್ಲ ಆದರೆ, ಜೇಬಾದರೂ ತುಂಬುತ್ತಿದೆ ಎಂಬುದು ಅವರ ಅಳಲು.
ಡೆಂಟಿಸ್ಟ್ ಆಗಿ ಅವರಿಗೆ ಸಿಗುತ್ತಿದ್ದುದು ತಿಂಗಳಿಗೆ ಎರಡು ಸಾವಿರ ರುಪಾಯಿ ಮಾತ್ರ. ಆದರೆ, ಬಿಪಿಓಗಳಲ್ಲಿ ತಿಂಗಳ ವರಮಾನ ಎಂಟು ಸಾವಿರ! ಪರಿಸ್ಥಿತಿ ಹೀಗಿರುವಾಗ ವೃತ್ತಿಪರತೆಯನ್ನು ಬದಿಗಿಟ್ಟು ಹಣದ ಕೊರತೆಯನ್ನು ನೀಗಿಸುವುದೇ ಸರಿ ಎಂದು ವೃತ್ತಿಗೆ ದೊಡ್ಡ ನಮಸ್ಕಾರ ಹೇಳುತ್ತಿದ್ದಾರೆ. ಬಿಳಿ ಕೋಟುಗಳು ಅನ್ಯಾಯವಾಗಿ ಬೀರು ಸೇರುತ್ತಿವೆ.
ಇದಕ್ಕೆ ಕಾರಣ ಹಣವೊಂದೇ ಅಲ್ಲ. ಬಿಡಿಎಸ್ ಮಾಡಿದವರಿಗೆ ಅವಕಾಶಗಳು ಕಡಿಮೆ, ಸ್ನಾತಕೋತ್ತರ ಮಾಡಿದವರಿಗೇ ಮಣೆ. ಸ್ನಾತಕೋತ್ತರ ಮಾಡುವುದೂ ದುಸ್ತರವಾಗಿದೆ. ಸೀಟುಗಳು ಕಡಿಮೆ ಮತ್ತು ಭಾರೀ ದುಬಾರಿ. ಹೀಗಾಗಿ ಬಿಡಿಎಸ್ ಮಾಡಿದವರು ಗತ್ಯಂತರವಿಲ್ಲದೆ ಅನ್ಯ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ.
(ಏಜೆನ್ಸೀಸ್)
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications