ಡೆಂಟಿಸ್ಟ್ ಕೆಲಸಕ್ಕಿಂತ ಬಿಪಿಓ ಕೆಲಸವೇ ಬೆಸ್ಟ್!
ಬೆಂಗಳೂರು, ಏ. 2 : ಕೆಲಸ ಯಾವುದಾದರೇನು ಬಾಳು ಮುಖ್ಯ. ಪುಡಿಗಾಸು ಸಿಗುವ ಡಿಗ್ರಿ ಮುಗಿಸಿದ ಕ್ಷೇತ್ರದಲ್ಲೇ ಯಾವೋನು ಕೆಲಸ ಮಾಡ್ತಾನೆ, ಹೊಟ್ಟೆ ತುಂಬುವಂಥ ಕೆಲಸ ಸಿಕ್ರೆ ಸಾಕು. ಡಿಗ್ರಿಗಷ್ಟು ಬೆಂಕಿಹಾಕಾ ಎನ್ನುವಂಥ ಪರಿಸ್ಥಿತಿ ಅನೇಕ ಕ್ಷೇತ್ರಗಳಲ್ಲಿ ಎದುರಾಗಿದೆ.
ಕಂಪ್ಯೂಟರ್ ಸೈನ್ಸೋ ಇನ್ನಾವುದರಲ್ಲಿಯೋ ಕೆಲಸ ಮುಗಿಸಿ ಕೆಲಸಕ್ಕೆ ಅರಸುತ್ತಿರುವವರು ಎಚ್ಟಿಎಂಎಲ್ ಆಪರೇಟರ್, ಡೇಟಾ ಎಂಟ್ರಿ ಆಪರೇಟರ್ ಕೆಲಸಕ್ಕೂ ಅರ್ಜಿ ಹಾಕುತ್ತಿದ್ದಾರೆ. ಇಂಥದೇ ಪರಿಸ್ಥಿತಿಯನ್ನು ಹಲ್ಲಿನ ವೈದ್ಯರೂ ಇಲ್ಲಿ ಎದುರಿಸುತ್ತಿದ್ದಾರೆ. ರಿಪೇರಿಗೆ ಬಂದ ಹಲ್ಲುಗಳನ್ನು ದುರುಸ್ತಿ ಮಾಡುವುದು ಅವರಿಗೆ ಬೇಜಾರಾಗಿದೆ ಎಂದಲ್ಲ. ಆ ಕೆಲಸದಲ್ಲಿ ಸಿಗುತ್ತಿರುವ ಪುಡಿಗಾಸು ಅವರಿಗೆ ಯಾತಕ್ಕೂ ಸಾಕಾಗುತ್ತಿಲ್ಲ.
ಅನೇಕ ದಂತ ವೈದ್ಯರು ಡೆಂಟಿಸ್ಟ್ ಕೆಲಸ ಬಿಟ್ಟು ಬಿಪಿಓ ಕ್ಷೇತ್ರದಲ್ಲಿ ಕೆಲಸ ಅರಸುತ್ತಿದ್ದಾರೆ. ಅಲ್ಲಿ ಕೂಡ ಇಂಥದೇ ಕೆಲಸವಾಗಬೇಕೆಂದೇನಿಲ್ಲ. ಮೆಡಿಕಲ್ ಟ್ರಾನ್ಸ್ಕ್ರಿಪ್ಶನಿಸ್ಟ್, ಬೋಧನೆ ಮತ್ತು ಆರೋಗ್ಯ ವಿಮೆ ಕ್ಷೇತ್ರಗಳಲ್ಲಿಯೂ ಜೀವನಾಧಾರಕ್ಕೆ ದುಡಿಯುತ್ತಿದ್ದಾರೆ. ಈ ಕೆಲಸಗಳಲ್ಲಿ ವೃತ್ತಿಸುಖವಿಲ್ಲ ಆದರೆ, ಜೇಬಾದರೂ ತುಂಬುತ್ತಿದೆ ಎಂಬುದು ಅವರ ಅಳಲು.
ಡೆಂಟಿಸ್ಟ್ ಆಗಿ ಅವರಿಗೆ ಸಿಗುತ್ತಿದ್ದುದು ತಿಂಗಳಿಗೆ ಎರಡು ಸಾವಿರ ರುಪಾಯಿ ಮಾತ್ರ. ಆದರೆ, ಬಿಪಿಓಗಳಲ್ಲಿ ತಿಂಗಳ ವರಮಾನ ಎಂಟು ಸಾವಿರ! ಪರಿಸ್ಥಿತಿ ಹೀಗಿರುವಾಗ ವೃತ್ತಿಪರತೆಯನ್ನು ಬದಿಗಿಟ್ಟು ಹಣದ ಕೊರತೆಯನ್ನು ನೀಗಿಸುವುದೇ ಸರಿ ಎಂದು ವೃತ್ತಿಗೆ ದೊಡ್ಡ ನಮಸ್ಕಾರ ಹೇಳುತ್ತಿದ್ದಾರೆ. ಬಿಳಿ ಕೋಟುಗಳು ಅನ್ಯಾಯವಾಗಿ ಬೀರು ಸೇರುತ್ತಿವೆ.
ಇದಕ್ಕೆ ಕಾರಣ ಹಣವೊಂದೇ ಅಲ್ಲ. ಬಿಡಿಎಸ್ ಮಾಡಿದವರಿಗೆ ಅವಕಾಶಗಳು ಕಡಿಮೆ, ಸ್ನಾತಕೋತ್ತರ ಮಾಡಿದವರಿಗೇ ಮಣೆ. ಸ್ನಾತಕೋತ್ತರ ಮಾಡುವುದೂ ದುಸ್ತರವಾಗಿದೆ. ಸೀಟುಗಳು ಕಡಿಮೆ ಮತ್ತು ಭಾರೀ ದುಬಾರಿ. ಹೀಗಾಗಿ ಬಿಡಿಎಸ್ ಮಾಡಿದವರು ಗತ್ಯಂತರವಿಲ್ಲದೆ ಅನ್ಯ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ.
(ಏಜೆನ್ಸೀಸ್)
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications