ನಿರೀಕ್ಷಣಾ ಜಾಮೀನು ಪಡೆದ ವರುಣ್

ಉತ್ತರ ಪ್ರದೇಶದ ಪಿಲಿಬಿತ್ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಂಧಿ ಮನೆತನದ ಕುಡಿ ವರುಣ್ ಗಾಂಧಿ ಅವರು ಚುನಾವಣೆ ಪ್ರಚಾರ ಸಭೆ ಭಾಗವಹಿಸಿ ಅಲ್ಪಸಂಖ್ಯಾತರ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ್ದರು. ನಂತರ ತಮ್ಮ ಹೇಳಿಕೆ ಸಮರ್ಥಿಸಿಕೊಂಡಿದ್ದ ವರುಣ್, ನಾನು ಗಾಂಧಿ, ನಾನು ಹಿಂದೂ, ನಾನು ಭಾರತೀಯ ಎಂದು ಸ್ಪಷ್ಪಪಡಿಸಿದ್ದರು.
ಕೇಂದ್ರ ಚುನಾವಣೆ ಆಯೋಗದ ವರುಣ್ ಹೇಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ನೀತಿ ಸಂಹಿತೆ ಉಲ್ಲಂಘನೆ ಆಗಿರುವುದು ಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಪಿಲಿಭಿತ್ ಜಿಲ್ಲಾಧಿಕಾರಿಗೆ ಆದೇಶ ನೀಡಿತ್ತು. ಐಪಿಸಿ ಕಲಂ 153 ಎ, 188, 125 ಅಡಿ ವರುಣ್ ವಿರುದ್ದ ಬಾರ್ಕೆಡ್ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
(ದಟ್ಸ್ ಕನ್ನಡ ವಾರ್ತೆ)
ವರುಣ್ ಗಾಂಧಿ ವಿರುದ್ದ ಮತ್ತೆರಡು ಕೇಸ್ ದಾಖಲು












Click it and Unblock the Notifications