ಮಾ. 21ರಂದು ಜನಪದ ಸಾಹಸ ಕಲೆಗಳ ಪ್ರದರ್ಶನ
ಬೆಂಗಳೂರು, ಮಾ. 20 : ಕರ್ನಾಟಕ ಜಾನಪದ ಅಕಾಡೆಮಿಯು ಮಾರ್ಚ್ 21 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಹಿಂಬಾಗದಲ್ಲಿರುವ 'ಸಂಸ ಬಯಲು ರಂಗಮಂದಿರ' ದಲ್ಲಿ ಜನಪದ ಸಾಹಸ ಕಲೆಗಳ ಪ್ರದರ್ಶನವನ್ನು ಸಂಜೆ 6.30 ಗಂಟೆಗೆ ಹಮ್ಮಿಕೊಂಡಿದೆ.
ಎಂ.ಎಚ್. ಕೃಷ್ಣಯ್ಯ ಅಧ್ಯಕ್ಷರು, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು ಇವರು ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ. ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರಾದ ಗೊ.ರು. ಚನ್ನಬಸಪ್ಪ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಡಾ ಬಿ.ವಿ. ರಾಜಾರಾಂ ಅಧ್ಯಕ್ಷರು, ಕರ್ನಾಟಕ ನಾಟಕ ಅಕಾಡೆಮಿ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ
ಟಿ. ನರಸೀಪುರ ಗರಡಿ ಮಹಾದೇವಪ್ಪನವರ ತಂಡ, ಮಂಡ್ಯ ಜಿಲ್ಲೆಯ ರಾಮಾಂಜನೇಯ ಸಾಹಸ ಕಲಾತಂಡ, ಬೆಂಗಳೂರಿನ ಕುಮರೇಶ್ ಮತ್ತು ತಂಡ, ರಾಮನಗರದ ಸಾಹಸ ಕಲಾ ಶಿಕ್ಷಣ ಕೇಂದ್ರ ಇವರು ದೊಣ್ಣೆ ವರಸೆ, ಕತ್ತಿ ವರಸೆ, ಬೆಂಕಿಚೆಂಡು, ಮುಂತಾದ ಸಾಹಸ ಕಲೆಗಳ ಪ್ರದರ್ಶನ ಮಾಡಲಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications