ವರುಣ್ ಗಾಂಧಿ ಹೇಳಿಕೆಗೆ ಸಹಮತವಿಲ್ಲ, ಬಿಜೆಪಿ

ಬಿಜೆಪಿ ಅಭ್ಯರ್ಥಿ ಮಾಡಿರುವ ಆರೋಪಗಳಿಗೆ ಸಹಮತವೂ ಇಲ್ಲ ಬೆಂಬಲವೂ ಇಲ್ಲ. ಅದು ಅವರ ವೈಯಕ್ತಿಕ ವಿಚಾರ, ಇದರಲ್ಲಿ ಪಕ್ಷ ತಲೆ ಹಾಕುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ವರುಣ್ ವಿರುದ್ದ ಕ್ರಮ ಕೈಗೊಳ್ಳುವುದು, ಬಿಡುವುದು ಚುನಾವಣೆ ಆಯೋಗಕ್ಕೆ ಬಿಟ್ಟಿದ್ದು. ಈ ವರೆಗೊ ಚುನಾವಣೆ ಆಯೋಗದಿಂದ ಪಕ್ಷಕ್ಕೆ ಯಾವುದೇ ನೋಟಿಸ್ ಬಂದಿಲ್ಲ ಎಂದು ಅವರು ಹೇಳಿದರು.
ಉತ್ತರ ಪ್ರದೇಶದ ಪಿಲಿಭಿತ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ವರುಣ ಗಾಂಧಿ ಅಲ್ಪಸಂಖ್ಯಾತರ ಮೇಲೆ ಗುರುತರ ಆರೋಪ ಮಾಡಿದ್ದರು. ಅದು ದೇಶದ್ಯಾಂತ ಚರ್ಚೆ ವಿಷಯವಾಗಿತ್ತು. ನೀತ ಸಂಹಿತೆ ಉಲ್ಲಂಘನೆ ಆರೋಪದಡಿ ಚುನಾವಣೆ ಆಯೋಗ ಅವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಿತ್ತು.
(ದಟ್ಸ್ ಕನ್ನಡ ವಾರ್ತೆ)
ವರುಣ್ ಗಾಂಧಿ ಬೆಂಬಲಕ್ಕೆ ನಿಂತ ಬಾಳ ಠಾಕ್ರೆ











Click it and Unblock the Notifications