ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಶೃಂಗೇರಿ: ನಕ್ಸಲರ ಗ್ರೆನೇಡ್ ದಾಳಿಗೆ ಪೇದೆ ಗಾಯ
ಚಿಕ್ಕಮಗಳೂರು, ಮಾ. 17 : ನಕ್ಸಲರು ಮತ್ತೆ ಪ್ರತ್ಯಕ್ಷರಾಗಿದ್ದು, ಶೃಂಗೇರಿ ಹತ್ತಿರ ಮಾತುವಳ್ಳಿ ಬಳಿ ನಕ್ಸಲ್ ನಿಗ್ರಹ ತಂಡದ ಮೇಲೆ ನಕ್ಸಲರು ಗ್ರೆನೇಡ್ ದಾಳಿ ನಡೆಸಿದ್ದರಿಂದ ಒಬ್ಬ ಪೊಲೀಸ್ ತೀವ್ರವಾಗಿ ಗಾಯಗೊಂಡಿದ್ದು, ಇನ್ನೊಬ್ಬ ಪೇದೆ ನಾಪತ್ತೆಯಾಗಿರುವ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.
ತಾರೇಶ್ ಎಂಬ ಪೊಲೀಸ್ ಪೇದೆ ಗಾಯಗೊಂಡಿದ್ದು, ಆವರನ್ನು ಶೃಂಗೇರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತಾರೇಶ್ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಯಾವುದೇ ಅಪಾಯವಿಲ್ಲ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಜಾಧವ್ ಎನ್ನುವ ಪೇದೆ ಕಾಣಿಯಾಗಿದ್ದು, ನಕ್ಸಲರು ಪೇದೆಯನ್ನು ಅಪಹರಿಸಿರುವ ಸಾಧ್ಯತೆಗಳಿವೆ. ಇಂದು ಬೆಳಗ್ಗೆ ಪೊಲೀಸ್ ನಿಗ್ರಹ ತಂಡ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿರುವ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ಹೆಚ್ಚಿನ ಮಾಹಿತಿಗೆ ನಿರೀಕ್ಷಿಸಲಾಗಿದೆ.
(ದಟ್ಸ್ ಕನ್ನಡ ವಾರ್ತೆ)
Comments
Story first published: Tuesday, March 17, 2009, 13:32 [IST]