ತೃತೀಯರಂಗ ಸಭೆಗೆನಾನು ಬರಲ್ಲ, ದೇವೇಗೌಡ

ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಿಶ್ವಾಸಮತದ ಕಾರ್ಯಕ್ರಮದಲ್ಲಿ ಮುಳುಗಿರುವುದರಿಂದ ಸಮಾವೇಶದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದರು. ಒರಿಸ್ಸಾದಲ್ಲಿ ನಡೆದಿರುವ ರಾಜಕೀಯ ಬೆಳವಣಿಗೆ ದೇಶದ ರಾಜಕೀಯದಲ್ಲಿ ಆಗಿರುವ ಮಹತ್ತರ ಬೆಳವಣಿಗೆಯಾಗಿದೆ. ಕಳೆದ 11 ವರ್ಷಗಳಿಂದ ಕೋಮುವಾದಿ ಪಕ್ಷಗಳೊಂದಿಗೆ ಗುರುತಿಸಿಕೊಂಡಿದ್ದ ಬಿಜೆಡಿ, ಇದೀಗ ಮೈತ್ರಿಯಿಂದ ಹೊರಬಂದಿದ್ದು, ತೃತೀಯ ರಂಗದೊಂದಿಗೆ ಗುರುತಿಸಿಕೊಂಡಿದೆ. ಇದರಿಂದಾಗಿ ಸರ್ಕಾರ ಅಲ್ಪಮತಕ್ಕೆ ಕುಸಿದಿದ್ದು, ವಿಶ್ವಾಸ ಮತಾಯಾಚಿಸುವಂತೆ ರಾಜ್ಯಪಾಲ ಎಂ ಸಿ ಭಂಡಾರೆ ಸೂಚನೆ ನೀಡಿದ್ದಾರೆ. ಬುಧವಾರ ಸದನದಲ್ಲಿ ವಿಶ್ವಾಸಮತ ತೋರಿಸಬೇಕಿರುವ ಹಿನ್ನೆಲೆಯಲ್ಲಿ ಆ ಕಾರ್ಯದಲ್ಲಿ ತಾವು ಮುಳುಗಿರುವುದಾಗಿ ಗೌಡರು ವಿವರಿಸಿದರು.
ಸ್ಥಾನ ಹೊಂದಾಣಿಕೆಗೆ ಸಂಬಂಧಿಸಿದಂತೆ ಬಿಜೆಪಿ-ಬಿಜೆಡಿ ನಡುವೆ ಉಂಟಾಗ ಬಿರುಕು ಮೈತ್ರಿ ಕಡಿದುರಕೊಳ್ಳುವ ಮಟ್ಟಕ್ಕೆ ಬಂದು ತಲುಪಿತು. ಬಿಜೆಪಿಯೊಂದಿಗೆ ಮೈತ್ರಿ ಕಡಿದುಕೊಂಡ ನವೀನ ಪಟ್ನಾಯಕ್ ತಟಸ್ಥರಾಗಿ ಉಳಿದಿದ್ದರು. ಕೊನೆ ಗಳಿಗೆಯಲ್ಲಿ ಪಟ್ನಾಯಕ್ ತೃತೀಯ ರಂಗಕ್ಕೆ ಸೇರ್ಪಡೆಯಾಗಿದ್ದಾರೆ. ಎಡಪಕ್ಷಗಳು ಹಾಗೂ ಇತರೆ ಶಾಸಕರು ಸೇರಿ ಸರ್ಕಾರ ಉಳಿಸುವ ಸಾಧ್ಯತೆಗಳಿವೆ. ಸರ್ಕಾರ ಉಳಿದಲ್ಲಿ, ನವೀನ ಪಟ್ನಾಯಕ್ ರಾಷ್ಟ್ರ ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸುವ ಸಾಧ್ಯತೆಗಳಿವೆ.
(ದಟ್ಸ್ ಕನ್ನಡ ವಾರ್ತೆ)
ತೃತೀಯ ರಂಗದ ಸಭೆ ವಿಫಲಕ್ಕೆ ಬಿಜೆಪಿ ಸಂಚು












Click it and Unblock the Notifications