ಮಾ.8ರಂದು ಸಂಜೆ ಜಾನಪದ ಸಂಗೀತದೌತಣ

ಆನೂರು ಅನಂತಕೃಷ್ಣ ಶರ್ಮಾ ಅವರ ನೇತೃತ್ವದ ತಂಡ 'ಲಯ ಲಹರಿ' ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದು, ಜಾನಪದ ಹಾಡುಗಳ ಗುಂಗು ಇಡೀ ಕಬ್ಬನ್ ಪಾರ್ಕನ್ನು ಆವರಿಸಿಕೊಳ್ಳಲಿದೆ.
ಜಾನಪದ ಸಂಗೀತ ತನ್ನದೇ ಆದ ವೈಶಿಷ್ಯತೆ ಹೊಂದಿದೆ. ಅದರಲ್ಲೂ ಕರ್ನಾಟಕದ ಜಾನಪದ ಸಂಗೀತ ವೈವಿಧ್ಯತೆಯಲ್ಲಿ ಎಲ್ಲ ಸಂಗೀತ ಪ್ರಕಾರಗಳಿಗಿಂತ ಬೇರೆಯಾಗಿಯೇ ನಿಲ್ಲುತ್ತದೆ.
ಜಾನಪದ ಸಂಗೀತದ ಆರಾಧಕರಾಗಿದ್ದರೆ ಕುಟುಂಬ ಸಮೇತರಾಗಿ ಮಹಾತ್ಮಾ ಗಾಂಧಿ ರಸ್ತೆ ಬಳಿಯಿರುವ ಕಬ್ಬನ್ ರಸ್ತೆಗೆ ಭಾನುವಾರ ಸಂಜೆ 5.00ಕ್ಕೆ ಬಂದು ಸೇರಿರಿ ಎಂದು ಪ್ರಕೃತಿಯ ಎಮ್.ಎಸ್. ಪ್ರಸಾದ್ ಆಹ್ವಾನ ನೀಡಿದ್ದಾರೆ. ಹೆಚ್ಚಿನ ವಿವರ ಬೇಕಿದ್ದಲ್ಲಿ ಸಂಪರ್ಕಿಸಿ : 9945368083. ಈ ಕಾರ್ಯಕ್ರಮ ಕೂಡ ಎಂದಿನಂತೆ ಉಚಿತವಾಗಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications