ಕಮಲ ಮುಡಿಗೇರಿಸಿದ ನಿರ್ಮಲಾ ವೆಂಕಟೇಶ್ ?
ಬೆಂಗಳೂರು, ಮಾ. 3 : ಇತ್ತೀಚೆಗಷ್ಟೇ ರಾಷ್ಟ್ರೀಯ ಮಹಿಳಾ ಆಯೋಗದಿ೦ದ ವಜಾಗೊಂಡಿದ್ದ ನಿರ್ಮಲಾ ವೆಂಕಟೇಶ್ ಇಂದು ಭಾರತೀಯ ಜನತಾ ಪಕ್ಷ ಸೇರಿಕೊಳ್ಳಲು ತಯಾರಿ ನಡೆಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ ಗೌಡ ಅವರನ್ನು ಪಕ್ಷದ ಕಛೇರಿಯಲ್ಲಿ ಭೇಟಿ ಮಾಡಿದ ನಿರ್ಮಲಾ, ಮಾರ್ಚ್ 5 ರಂದು ಅಧಿಕೃತವಾಗಿ ಬಿಜೆಪಿ ಸೇರುವುದಾಗಿ ಸ್ಪಷ್ಟಪಡಿಸಿದ್ದಾರೆ ಎಂದು ಪಕ್ಷದ ಮೂಲಗಳ ಪ್ರಕಾರ ತಿಳಿದುಬಂದಿದೆ.
ಮಂಗಳೂರು ಎಮ್ನೇಶಿಯಾ ಪಬ್ ದಾಳಿಯ ನಂತರ ಮಹಿಳಾ ಆಯೋಗದ ಪರವಾಗಿ ನಿರ್ಮಲಾ ಮಂಗಳೂರಿಗೆ ಭೇಟಿ ನೀಡಿ ಕೇಂದ್ರಕ್ಕೆ ವರದಿ ನೀಡಿದ್ದರು. ನಿರ್ಮಲಾ ನೀಡಿದ ವರದಿ ಸರಿ ಇಲ್ಲ ಕೇಂದ್ರ ಸಚಿವೆ ರೇಣುಕ ಚೌಧುರಿ ಅವರ ವಾದವಾಗಿತ್ತು. ಈ ಇಬ್ಬರೂ ಮಹಿಳಾಮಣಿಗಳ ಜಟಾಪಟಿಯಲ್ಲಿ ನಿರ್ಮಲಾ ವೆಂಕಟೇಶ್ ತಲೆದಂಡ ತೆರಬೇಕಾಗಿ ಬಂದು ಆಯೋಗದಿಂದ ವಜಾಗೊಂಡಿದ್ದರು.
ಯುಪಿಎ ಸರಕಾರದ ನಿರ್ಧಾರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ನಿರ್ಮಲಾ ವೆಂಕಟೇಶ್ , ತಾನು ನೀಡಿರುವ ವರದಿಯನ್ನು ತಿರಸ್ಕರಿಸಿರುವ ಕೇಂದ್ರದ ಕ್ರಮದ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರುವುದಾಗಿ ಸೋಮವಾರ ತಿಳಿಸಿದ್ದರು. ಹಾಗೇ ತನ್ನ ಮುಂದಿನ ನಿರ್ಧಾರವನ್ನು ಸದ್ಯದಲ್ಲಿಯೇ ಪ್ರಕಟಿಸುವುದಾಗಿ ಹೇಳಿದ್ದರು.
(ದಟ್ಸ್ ಕನ್ನಡ ವಾರ್ತೆ)
ಕೇಂದ್ರದ ವಿರುದ್ಧ ನಿರ್ಮಲಾ ವೆಂಕಟೇಶ್ ಕಿಡಿ












Click it and Unblock the Notifications