ಪೂರಕ ಬಜೆಟ್ 2009ನ ಮುಖ್ಯಾಂಶಗಳು

ಬೆಂಗಳೂರು, ಫೆ. 27 : ಫೆ. 20 ರಂದು ರಾಜ್ಯ ಬಜೆಟ್ ಮಂಡಿಸಿದ್ದ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಕೆಲ ವರ್ಗಗಳ ಮುಖಂಡರು ತಮ್ಮ ಸಮಾಜಕ್ಕೆ ಪ್ರಾತಿನಿಧ್ಯ ದೊರೆತಿಲ್ಲ ಎಂದು ಬಹಿರಂಗವಾಗಿ ಅಸಮಾಧಾನ ತೋಡಿಕೊಂಡಿದ್ದರು. ಲೋಕಸಭೆ ಚುನಾವಣೆ ದೃಷ್ಟಿಯಲ್ಲಿರಿಸಿಕೊಂಡು ಇಂದು ಮತ್ತೆ ಪೂರಕ ಬಜೆಟ್ ಮಂಡಿಸಿದ ಯಡಿಯೂರಪ್ಪ ಕೈಬಿಟ್ಟು ಹೋಗಿದ್ದ ವರ್ಗಗಳ ಮನವೂಲಿಕೆಗೆ ಯತ್ನಿಸಿದ್ದಾರೆ.

ಮಠಮಾನ್ಯಗಳ ವಿಷಯದಲ್ಲಿ ಯಡಿಯೂರಪ್ಪ ಅತ್ಯಂತ ಧಾರಾಳಿ ಎಂದು ಪ್ರತಿಪಕ್ಷಗಳು ತೀವ್ರ ಟೀಕೆ ಟಿಪ್ಪಣಿಗಳ ಮಧ್ಯದಲ್ಲಿಯೇ ಮತ್ತೆ ಮಠಮಾನ್ಯಗಳಿಗೆ ಲಕ್ಷಾಂತರ ರುಪಾಯಿಗಳನ್ನು ನೀಡುವುದಾಗಿ ಸಿಎಂ ಘೋಷಿಸಿದ್ದಾರೆ. ಇನ್ನೊಂದು ಪ್ರಮುಖ ವಿಷಯವೆಂದರೆ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಡ ಪ್ರಭು ಕೆಂಪೇಗೌಡರ ಹೆಸರಿಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿರುವುದಾಗಿ ಯಡಿಯೂರಪ್ಪ ಹೇಳಿರುವುದು ಇಂದಿನ ವಿಶೇಷವಾಗಿದೆ.

ಪೂರಕ ಬಜೆಟ್ ನ ಮುಖ್ಯಾಂಶಗಳು

* ಕನ್ನಡ ತತ್ರಾಂಶದ ಮೇಲಿನ ವ್ಯಾಟ್ ಶೇ 12 .5 ರಿಂದ 4 ಕ್ಕೆ ಇಳಿಕೆ
* ಕಬಳಿಕೆ ಜಮೀನಿನ ಆದಾಯ ನಿರೀಕ್ಷೆ ಒಟ್ಟು 1 ಸಾವಿರ ಕೋಟಿ ರುಪಾಯಿ.
* ಅಣ್ಣಿಗೇರಿ ಪಂಪಾ ಸ್ಮಾರಕಕ್ಕೆ 1 ಕೋಟಿ ರುಪಾಯಿ
* ಪಂಡರಾಪುರ ಯಾತ್ರಿ ನಿವಾಸಕ್ಕೆ 1 ಕೋಟಿ ರುಪಾಯಿ
* ಸಾಣೇಹಳ್ಳಿ ಉತ್ಸವಕ್ಕೆ ಪ್ರತಿ ವರ್ಷ 20 ಲಕ್ಷ ರುಪಾಯಿ
* ಚಲನಚಿತ್ರ ಧಾರ್ಮಿಕ ದತ್ತಿ ನಿಧಿಗೆ 1 ಕೋಟಿ ರುಪಾಯಿ
* ಪೈರಸಿ ತಡೆಗೆ ಕಟ್ಟುನಿಟ್ಟಿನ ಕ್ರಮ.
* ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಿತ್ರಗಳ ಪ್ರೋತ್ಸಾಹ ಧನ 3 ಲಕ್ಷದಿಂದ 5 ಲಕ್ಷ ರುಪಾಯಿಗಳಿಗೆ ಏರಿಕೆ
* ಪ್ರತಿ ವರ್ಷ ಬಸವ ಉತ್ಸವಕ್ಕೆ 50 ಲಕ್ಷ ರುಪಾಯಿ

* ಕೊಡವ ಸಮಾಜಕ್ಕೆ 1 ಕೋಟಿ ರುಪಾಯಿ
* ಸಾರಾಯಿ ನಿಷೇಧದಿಂದ ನಿರಾಶ್ರಿತರಾದರವರಿಗೆ ಸಾಲ ಸೌಲಭ್ಯ
* ರಾಜ್ಯದ ಮೂರು ಛಲವಾದಿ ಭವನಕ್ಕೆ 1 ಕೋಟಿ ರುಪಾಯಿ
* ನರಗುಂದಲ್ಲಿ ಜಗನ್ನಾಥ ಜೋಷಿ ಸ್ಮಾರಕ ನಿರ್ಮಾಣ
* ಕುಪ್ಪಳ್ಳಿಯ ಕುವೆಂಪು ಪ್ರತಿಷ್ಠಾನಕ್ಕೆ 50 ಲಕ್ಷ ರುಪಾಯಿ
* ಸೋಲೋರಿನ ಈಡಿಗ ಸಮುದಾಯದ ಸಂಸ್ಥಾನಕ್ಕೆ 3 ಕೋಟಿ ರುಪಾಯಿ
* ಗ್ರಾಮ ಸಹಾಯಕರ ಸಹಾಯಧನ 2 ಸಾವಿರದಿಂದ 3 ಸಾವಿರಕ್ಕೆ ಏರಿಕೆ
* ಬಿಐಎಎಲ್ ಗೆ ಕೆಂಪೇಗೌಡ ಹೆಸರಿಡಲು ಕೇಂದ್ರಕ್ಕೆ ಶಿಫಾರಸ್ಸು

(ದಟ್ಸ್ ಕನ್ನಡ ವಾರ್ತೆ)
ಪೂರಕ ಓದಿಗೆ:
ಬಿಬಿಎಂಪಿ ಬಜೆಟ್ 2009-10 ಮುಖ್ಯಾಂಶಗಳು
ಟಿವಿ, ವಾಷಿಂಗ್ ಮೆಷಿನ್ ಗೃಹಬಳಕೆ ವಸ್ತುಗಳು ಅಗ್ಗ
ಶಿಕ್ಷಣ ನೀರಾವರಿ ಕೃಷಿಗೆ ಸಿಂಹಪಾಲು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+