ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಯುಪಿಎ ಸರ್ಕಾರದ ಸಾಧನೆಯೇ ಶ್ರೀರಕ್ಷೆ, ಸೋನಿಯಾ
ಕಾಂಗ್ರೆಸ್ಸಿನ 14ನೇ ಸಂಸದೀಯ ಮಂಡಳಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮನಸ್ತಾಪ, ವೈಮನಸ್ಸು ಕೈಬಿಟ್ಟು ಒಗ್ಗಟ್ಟಿನಿಂದ ಚುನಾವಣೆ ಎದುರಿಸಿದರೆ ಮಾತ್ರ ಜಯಗಳಿಸಲು ಸಾಧ್ಯ ಎಂದರು. ಕಾಂಗ್ರೆಸ್ ನೇತೃತ್ವದ ಯುಪಿಎ ರಂಗ ಕೇಂದ್ರದಲ್ಲಿ ಐದು ವರ್ಷ ಕಾಲ ನಿರಾಂತಕವಾಗಿ ಅಡಳಿತ ಅವಧಿ ಮುಗಿಸಿದ್ದಕ್ಕೆ ಅತೀವ ಸಂತಸ ವ್ಯಕ್ತಪಡಿಸಿದ ಅವರು, ಈ ಐದು ವರ್ಷಗಳ ಅವಧಿಯಲ್ಲಿ ಕಾಂಗ್ರೆಸ್ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಅಷ್ಟೂ ಭರವಸೆಯನ್ನು ಈಡೇರಿಸಿದೆ ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡರು.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸಾಧನೆಯನ್ನು ಜನಸಾಮಾನ್ಯರಿಗೆ ತಲುಪಿಸುವ ಕೆಲಸ ಕಾಂಗ್ರೆಸ್ ನಾಯಕರು ಹೊರಬೇಕು ಎಂದು ಸೂಚನೆ ನೀಡಿದ ಸೋನಿಯಾ ಗಾಂಧಿ, ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಹಾಗೂ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಅವರ ನಾಯಕತ್ವವನ್ನು ಮನಸಾರೆ ಹೊಗಳಿಸಿದರು.
(ದಟ್ಸ್
ಕನ್ನಡ
ವಾರ್ತೆ)
8
ಆಸ್ಕರ್
ಪ್ರಶಸ್ತಿ
ಯಪಿಎ
ಸಾಧನೆ,
ಕಾಂಗ್ರೆಸ್
Comments
ಕಾಂಗ್ರೆಸ್ congress ಮನಮೋಹನ್ ಸಿಂಗ್ ಪ್ರಣಬ್ ಮುಖರ್ಜಿ manmohan singh ಸೋನಿಯಾ ಗಾಂಧಿ sonia gandhi ನವದೆಹಲಿ new delhi upa pranab mukherjee ಲೋಕಸಭೆ ಚುನಾವಣೆ 2009 lok sabha polls 2009
Story first published: Wednesday, February 25, 2009, 16:08 [IST]