ಉಗ್ರರಿಗೆ ಫತ್ವಾ ಹೊರಡಿಸಿ, ವಿ ಎಚ್ ಪಿ
ನವದೆಹಲಿ, ಫೆ. 23 : ಭಾರತದಲ್ಲಿ ಧರ್ಮಾಧಾರಿತ ಹಿಂಸೆ ಹೆಚ್ಚುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿರುವ ವಿಶ್ವ ಹಿಂದೂ ಪರಿಷತ್, ಭಾರತ ಇಸ್ಲಾಂನ ಮಿತ್ರ ರಾಷ್ಟ್ರ, ಹಿಂದೂಗಳು ದ್ರೋಹಿಗಳಲ್ಲ ಎಂದು ಫತ್ವಾ ಹೊರಡಿಸಬೇಕೆಂದು ದೇಶದ 15 ಪ್ರಮುಖ ಮುಸ್ಲಿಂ ಸಂಘಟನೆಗಳಿಗೆ ಪತ್ರ ಬರೆದಿದೆ.
ಹಲವು ಮಠಾಧೀಶರನ್ನು ಒಳಗೊಂಡ ವಿಶ್ವ ಹಿಂದು ಪರಿಷತ್ತಿನ ಧರ್ಮ ರಕ್ಷಾ ಮಂಚ್, ಭಾರತ ಮುಸ್ಲಿಮರ ವಿರೋಧಿ ರಾಷ್ಟ್ರವಲ್ಲ, ಬದಲಾಗಿ ಭಾರತ ಮುಸ್ಲಿಮರ ಮಿತ್ರ ರಾಷ್ಟ್ರ ಎಂದು ಫತ್ವಾ ಹೊರಡಿಸಬೇಕು, ಇದನ್ನು ಪಾಲಿಸದ ವ್ಯಕ್ತಿ ಮುಸ್ಲಿಂ ಅಲ್ಲ ಎಂದು ಘೋಷಿಸಬೇಕು ಎ೦ದು ಮುಸ್ಲಿಂ ಸಂಘಟನೆಗಳಿಗೆ ಬರೆದಿರುವ ಪತ್ರದಲ್ಲಿ ಕೋರಲಾಗಿದೆ ಎಂದು ವಿ ಎಚ್ ಪಿ ವಕ್ತಾರರು ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಐಎಸ್ಐನಿಂದ ಆರ್ಎಸ್ಎಸ್ ಗೆ ಧನಸಹಾಯ, ಪಾಂಡೆ












Click it and Unblock the Notifications