23 ಕಾರ್ಯನಿತರ ಪತ್ರಕರ್ತರಿಗೆ ಪ್ರಶಸ್ತಿ ಪುರಸ್ಕಾರ
ಮಡಿಕೇರಿ, ಫೆ. 23 : ಕೊಡಗಿನಲ್ಲಿ ಎರಡು ದಿನಗಳ ಕಾಲ ನಡೆದ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ 29ನೇ ಸಮ್ಮೇಳನಕ್ಕೆ ಭಾನುವಾರ ಸಂಜೆ ತೆರೆ ಬಿದ್ದಿತು. ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿದ ವಿವಿಧ ಪತ್ರಿಕೆಗಳ ರಾಜ್ಯ 23 ಮಂದಿ ಪತ್ರಕರ್ತರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಕೊಡಗಿನ ಜಿಲ್ಲಾ ಕೇಂದ್ರವಾದ ಮಂಜಿನ ನಗರಿಯ ಕಾವೇರಿ ಹಾಲ್ ನಲ್ಲಿ ನಡೆದ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸಂಘದ 2007ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಪಾತ್ರರಾದ ಪತ್ರಕರ್ತರನ್ನು ಶಾಸಕ ಅಪ್ಪಚ್ಚು ರಂಜನ್ ಶಾಲು ಹೊದಿಸಿ, ಪ್ರಶಸ್ತಿ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಿ ಆತ್ಮೀಯವಾಗಿ ಸನ್ಮಾನಿಸಿದರು.
ಪ್ರಶಸ್ತಿ ಪಡೆದ ಪತ್ರಕರ್ತರ ವಿವರ
* ಕೆ ಎಸ್ ನಾಗಭೂಷಣ, ಪಿ ಆರ್ ರಾಮಯ್ಯ ಸ್ಮಾರಕ ಪ್ರಶಸ್ತಿ (ಪ್ರಜಾವಾಣಿ ನಿವೃತ್ತ ಸುದ್ದಿ ಸಂಪಾದಕ)
* ಉಮಾದೇವಿ ಟೋಪಣ್ಣವರ - ಯಶೋದಮ್ಮ ಜಿ ನಾರಾಯಣ ಪ್ರಶಸ್ತಿ (ಕನ್ನಡಮ್ಮ ಪತ್ರಿಕೆ)
* ಡಿ ಗರುಡ - ಕೆ ಎ ನೆಟ್ಟಕಲ್ಲಪ್ಪ ಪ್ರಶಸ್ತಿ (ಪ್ರಜಾವಾಣಿ)
* ರಾಹುಲ್ ಬೆಳಗಲಿ - ಕೆಂಪೇಗೌಡ ಸ್ಮಾರಕ ಪ್ರಶಸ್ತಿ
* ಕೃಷ್ಣಿ ಶಿರೂರ್ - ಜಿ ನಾರಾಯಣಸ್ವಾಮಿ ಪ್ರಶಸ್ತಿ
* ಪರಮೇಶ್ವರ ಹೇಮಗಿರಿಮಠ - ಬಿ ಜಿ ತಿಮ್ಮಪ್ಪಯ್ಯ ಪ್ರಶಸ್ತಿ
* ಸಿದ್ದರಾಜು - ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ
* ಡಿ ಜಿ ನಾಗರಾಜ್ - ಕಿಡಿ ಶೇಷಪ್ಪ ಸ್ಮಾರಕ ಪ್ರಶಸ್ತಿ (ಲೋಕಪ್ರಭ)
* ಎಚ್ ಬಿ ಮದನ್ ಗೌಡ - ಮ. ರಾಮಮೂರ್ತಿ ಸ್ಮಾರಕ ಪ್ರಶಸ್ತಿ (ಅಮೋಘ ವಾಹಿನಿ)
* ಕೆ ಎನ್ ನಾಗೇಶಕುಮಾರ್ - ಅಪ್ಪಾಜಿಗೌಡ ಸ್ಮಾರಕ ಪ್ರಶಸ್ತಿ (ಸಿನಿ ಸರ್ಕಲ್ )
* ಜಿ ರಾಜೇಂದ್ರ - ಡಿವಿಜಿ ಪ್ರಶಸ್ತಿ
* ಯು ಎಂ ಪೂವಯ್ಯ -ಬದರಿನಾಥ್ ಹೊಂಬಾಳೆ ಪ್ರಶಸ್ತಿ (ಬ್ರಹ್ಮಗಿರಿ ವಾರಪತ್ರಿಕೆ)
* ಕೇಶವ ಪ್ರಸಾದ ಬಿ ಕಿದಿಯೂರು (ಪಟೇಲ್ ಬೈರಹನುಮಯ್ಯ ಸ್ಮಾರಕ ಪ್ರಶಸ್ತಿ (ವಿಜಯ ಕರ್ನಾಟಕ)
* ಶಿವಮೂರ್ತಿ ಜುಪ್ತಿಮಠ - ಆರ್ ಎಲ್ ವಾಸುದೇವರಾವ್ (ವಿಜಯ ಕರ್ನಾಟಕ)
* ಕುಂದೂರು ಉಮೇಶ್ ಭಟ್ - ಆರ್ ಎಲ್ ವಾಸುದೇವರಾವ್ ವನಸುಮ ಪ್ರಶಸ್ತಿ
* ಎಂ ವಿ ಚಂದ್ರಶೇಖರ್ - ವಿ ಆರ್ ಗಿರಿಧರ್ ಸ್ಮಾರಕ ಪ್ರಶಸ್ತಿ
* ಕುಡೇಕಲ್ ಸಂತೋಷ - ಬಿ ಎಸ್ ವೆಂಕಟರಾಮ್ ಪ್ರಶಸ್ತಿ
* ಎ ಎಲ್ ನಾಗೇಶ್ - ಖಾದ್ರಿ ಶಾಮಣ್ಣ ಪ್ರಶಸ್ತಿ
* ಎಚ್ ಟಿ ಅನಿಲ್ - ಎಂ ಸಿ ಮಂಗಳಾ ವರ್ಗೀಸ್ ಪ್ರಶಸ್ತಿ (ಕನ್ನಡ ಪ್ರಭ)
* ಎಂ ಎಸ್ ಮಂಜುನಾಥ್ - ಮಂಡಿಬೆಲೆ ರಾಜಣ್ಣ ಪ್ರಶಸ್ತಿ (ಕೆಪಿಎನ್ ಛಾಯಾಗ್ರಾಹಕ)
* ಎಚ್ ಎಸ್ ಕುಮಾರಸ್ವಾಮಿ - ಯಜಮಾನ್ ಟಿ ನಾರಾಯಣಪ್ಪ ಪ್ರಶಸ್ತಿ (ಸಂಯುಕ್ತ ಕರ್ನಾಟಕ)
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications