ಲೋಕಸಭೆಗೆ ಕನ್ನಡಿಗರನ್ನೇ ಕಣಕ್ಕಿಳಿಸಿ, ನಾರಾಯಣಗೌಡ
ಬೆಂಗಳೂರು, ಫೆ. 13 : ಕನ್ನಡೇತರರಿಗೆ ಲೋಕಸಭೆ ಚುನಾವಣೆ ಟಿಕೆಟ್ ನೀಡುವ ರಾಷ್ಟ್ರೀಯ ಪಕ್ಷಗಳ ನಾಯಕರಿಗೆ ಹಾದಿ ಬೀದಿಯಲ್ಲಿ ಜನ ಹೊಡೆಯುತ್ತಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿಎ ನಾರಾಯಣಗೌಡ ಎಚ್ಚರಿಕೆ ನೀಡಿದ್ದಾರೆ.
ಬಸವನಗುಡಿ ವಿಧಾನಸಭೆ ಕ್ಷೇತ್ರದಲ್ಲಿ ನಡೆದ ವೇದಿಕೆ ಸದಸ್ಯತ್ವದ ನೋಂದಣಿ ಅಭಿಯಾನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಪಕ್ಷದ ನಿಧಿಗೆ ಕೋಟ್ಯಂತರ ರುಪಾಯಿ ಸಿಗುತ್ತದೆ ಎಂದು ಆಂಧ್ರ, ತಮಿಳುನಾಡಿನವರಿಗೆ ಲೋಕಸಭೆ ಟಿಕೆಟ್ ಮಾರಿಕೊಳ್ಳುವುದನ್ನು ಸಹಿಸುವುದಿಲ್ಲ. ರಾಜ್ಯದಲ್ಲಿ ಗ್ರಾಮ ಪಂಚಾಯತಿಯಿಂದ ಹಿಡಿದು ಲೋಕಸಭೆವರೆಗೆ ಕನ್ನಡಿಗನೇ ಸಾರ್ವಭೌಮ. ರಾಷ್ಟ್ರೀಯ ಪಕ್ಷಗಳು ಕನ್ನಡಿಗರನ್ನೇ ನಿಲ್ಲಿಸಿ, ಗೆಲ್ಲಿಸಬೇಕು. ಇಲ್ಲವಾದಲ್ಲಿ ವಿಚಾರಿಸಿಕೊಳ್ಳಬೇಕಾಗುತ್ತದೆ. ಕನ್ನಡಿಗರಿಗೆ ಅನ್ಯಾಯ ಮಾಡುವ ನಾಯಕರನ್ನು ಕರವೇ ಸಹಿಸುವುದಿಲ್ಲ ಎಂದು ಅವರು ಗುಡುಗಿದರು.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications