ಫೆ. 20 ರಂದು ರಾಜ್ಯ ಬಜೆಟ್ ಮಂಡನೆ: ಶೋಭಾ
ಬೆಂಗಳೂರು, ಫೆ. 4 : ರಾಜ್ಯ ವಿಧಾನಮಂಡಲದ ಬಜೆಟ್ ಅಧಿವೇಶನ ಫೆ.19 ರಿಂದ ಆರಂಭವಾಗಲಿದೆ. ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಫೆ. 20 ರಂದು ಬಜೆಟ್ ಮಂಡಿಸಲಿದ್ದಾರೆ. ಅಲ್ಪಾವಧಿ ಅಧಿವೇಶನ ಆಗಿರುವ ಹಿನ್ನೆಲೆಯಲ್ಲಿ ನಾಲ್ಕು ತಿಂಗಳ ಅವಧಿಗೆ ಲೇಖಾನುದಾನ ಕೋರಲಿದ್ದಾರೆ. ಫೆ 27ಕ್ಕೆ ಅಧಿವೇಶನ ಅಂತ್ಯಗೊಳ್ಳಲಿದೆ. ಪ್ರತಿ ಪಕ್ಷಗಳ ವಿರೋಧದ ನಡುವೆಯೂ 2 ಕೋಟಿ ರುಪಾಯಿಗಳನ್ನು ಭಯೋತ್ಪಾದನಾ ವಿರೋಧಿ ಅಭಿಯಾನಕ್ಕೆ ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ.
ಲೋಕಸಭೆ ಚುನಾವಣೆಗೆ ಯಾವುದೇ ಕ್ಷಣದಲ್ಲಿ ಅಧಿಸೂಚನೆ ಹೊರಬೀಳುವ ಹಿನ್ನೆಲೆಯಲ್ಲಿ ಅಲ್ಪಾವಧಿ ಅಧಿವೇಶನ ನಡೆಸಲು ನಿರ್ಧರಿಸಲಾಗಿದೆ. ಸಂಸತ್ತಿನಲ್ಲೂ ಇದೇ ಕ್ರಮ ಅನುಸರಿಸಲಾಗುತ್ತಿದೆ. ಇಲಾಖಾವಾರು ಹೆಚ್ಚಿನ ಚರ್ಚೆಗೆ ಅವಕಾಶ ಇರುವುದಿಲ್ಲ ಎಂದು ಸಂಪುಟ ಸಭೆ ವಿವರ ನೀಡಿದ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.
ಸಚಿವ ಸಂಪುಟದ ಪ್ರಮುಖ ನಿರ್ಣಯಗಳು:
* ಫೆ 19 ರಿಂದ 27ರ ವರೆಗೆ ಬಜೆಟ್ ಅಧಿವೇಶನ.
* 5 ಸಾವಿರಕ್ಕೂ ಹೆಚ್ಚು ಅರೆ ವೈದ್ಯ ಸಿಬ್ಬೆಂದಿ ನೇಮಕಕ್ಕೆ ಅಸ್ತು.
* ಗುತ್ತಿ ಬಸವಣ್ಣ, ಚಿಮ್ಮಲಗಿ ಏತ ನೀರಾವರಿ ಯೋಜನೆಗಳಿಗೆ ಮೋಕ್ಷ.
* ಘಟಪ್ರಭಾದಲ್ಲಿ 1,230 ಮೆಗಾವ್ಯಾಟ್ ವಿದ್ಯುತ್ ಉತ್ಪನ್ನ ಯೋಜನೆಗೆ ಅನುಮತಿ.
* ಸಾಮಾಜಿಕ ಭದ್ರತಾ ಯೋಜನೆ ಪಿಂಚಣಿ ಹಣಕ್ಕೆ ಉಳಿತಾಯ ಖಾತೆ ಕಡ್ಡಾಯ.
* ತುಮಕೂರು ಜಿಲ್ಲೆಯ ಎರಡು ಏತ ನೀರಾವರಿ ಯೋಜನೆಗೆ ಅನುಮತಿ.
* ಬಿಬಿಎಂಪಿ ವ್ಯಾಪ್ತಿಯಲ್ಲಿ ಮಳೆ ಕೊಯ್ಲು ಕಡ್ಡಾಯ.
* ಭಯೋತ್ಪಾದನೆ ವಿರೋಧಿ ಅಂದೋಲನಕ್ಕೆ 2 ಕೋಟಿ ರುಪಾಯಿಗಳ ಅನುದಾನ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications