ಎನ್ ಕೌಂಟರ್ ನಲ್ಲಿ ಸತ್ತವನು ರವಿಪೂಜಾರಿ ಬಂಟ

ಮಂಗಳೂರು, ಜ.30:ಶುಕ್ರವಾರ ಮುಂಜಾನೆ ಗವಿಪುರ ಬಳಿ ನಡೆದ ಪೊಲೀಸ್ ಎನ್ ಕೌಂಟರ್ ನಲ್ಲಿ ಹತನಾದವನನ್ನು ಧನಂಜಯ್ ಎಂದು ಗುರುತಿಸಲಾಗಿದೆ. ಷಾರ್ಪ್ ಶೂಟರ್ ಆದ ಈತ ಭೂಗತ ಪಾತಕಿ ರವಿ ಪೂಜಾರಿಯ ಬಲಗೈ ಬಂಟ ಎನ್ನಲಾಗಿದೆ.

ಪೊಲೀಸರ ಗುಂಡಿಗೆ ಬಲಿಯಾದವನ ಮುಖ ಚಹರೆ ಮತ್ತು ದೇಹದ ಇತರೆ ಭಾಗಗಳ ಆಧಾರದ ಮೇಲೆ ಈತನನ್ನು ಉಡುಪಿಯ ಧನಂಜಯ್ ಎಂದು ಗುರುತಿಸಲಾಗಿದ್ದು, ಹಲವಾರು ಡಕಾಯಿತಿ, ಕೊಲೆ, ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗಿರುವ ರವಿಪೂಜಾರಿ ಬಲಗೈ ಬಂಟನಾಗಿದ್ದ ಎಂದು ಪೊಲೀಸರು ತಿಳಿದ್ದಾರೆ.

ಗುರುವಾರ ರಾತ್ರಿ ಮುಲ್ಕಿ ಪೊಲೀಸರು ತಡೆಗೋಡೆ ನಿರ್ಮಿಸಿ ಹೆದ್ದಾರಿ ವಾಹನಗಳನ್ನು ತಪಾಸಣೆ ಮಾಡುತ್ತಿದ್ದರು. ಇದೇ ವೇಳೆ ಅಲ್ಲಿಗೆ ವೇಗವಾಗಿ ಬಂದ ಮಾರುತಿ ಓಮ್ನಿ ಪೊಲೀಸರ ಸೂಚನೆಯನ್ನು ಪಾಲಿಸದೆ ವೇಗವಾಗಿ ಮುನ್ನ್ನುಗ್ಗಿ ಪರಾರಿಯಾಯಿತು. ಮಾರುತಿ ಓಮ್ನಿಯ ಬೆನ್ನತ್ತಿದ್ದ ಪೊಲೀಸರು ಬಜಪೆ ಮತ್ತು ಮಂಗಳೂರು ಪೊಲೀಸ್ ಠಾಣೆಗಳಿಗೆ ಸಂದೇಶ ರವಾನಿಸಿದರು. ಓಮ್ನಿ ಗವಿಪುರದ ಬಳಿ ಬಂದಾಗ ಅದರಲ್ಲಿದ್ದವರು ಪೊಲೀಸರೆಡೆಗೆ ಗುಂಡಿನ ದಾಳಿ ನಡೆಸಿದರು. ಇದಕ್ಕೆ ಪ್ರತಿಯಾಗಿ ಪೊಲೀಸರು ಗುಂಡಿನ ಚಕಮಕಿ ನಡೆಸಿದರು. ಸಬ್ ಇನ್ಸ್ ಪೆಕ್ಟರ್ ಪ್ರಕಾಶ್ ಹಾರಿಸಿದ ಗುಂಡು ಧನಂಜಯ್ ಗೆ ತಗುಲಿ ಆತ ಮೃತಪಟ್ಟಿದ್ದಾನೆ.

(ದಟ್ಸ್ ಕನ್ನಡ ವಾರ್ತೆ)

ಮಂಗಳೂರು ಬಳಿ ಗುಂಡಿನ ಚಕಮಕಿ; ಓರ್ವ ಸಾವು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+