ಬೀದರ್ ನಲ್ಲಿ ವಿಮಾನಕ್ಕೆ ಬೆಂಕಿ, ಒಂದು ಸಾವು
ಬೀದರ್, ಜ. 21 : ಇಲ್ಲಿನ ಭಾರತೀಯ ವಾಯುಯಾನ ತರಬೇತಿ ಕೇಂದ್ರದ ಹೊರವಲಯದಲ್ಲಿ ಬುಧವಾರ ಬೆಳಗ್ಗೆ ಸಾಹಸ ಪ್ರದರ್ಶನ ನಡೆಸುತ್ತಿದ್ದ ವಿಮಾನ ಅಪಘಾತಕ್ಕೀಡಾಗಿ ವಿಮಾನ ಚಾಲಕ ಸಾವನ್ನಪ್ಪಿದ್ದಾರೆ. ಸಾಹಸ ಕ್ರೀಡೆಯಲ್ಲಿ ತನ್ಮಯವಾಗಿದ್ದ ಎರಡು ವಿಮಾನಗಳಲ್ಲಿ ಒಂದು ವಿಮಾನದ ರೆಕ್ಕೆಗೆ ಆಕಸ್ಮಾತ್ ಬೆಂಕಿ ತಗುಲಿದ ಪರಿಣಾಮ ಅಪಘಾತ ಸಂಭವಿಸಿದೆ. ಹಿರಿಯ ಪೈಲೆಟ್ ಆಗಿದ್ದ ಹರ್ಯಾಣ ಮೂಲದ ಆರ್ ಎಸ್ ಧನಿವಾಲ್ ದುರ್ಮರಣಕ್ಕೆ ಈಡಾಗಿದ್ದಾರೆ.
ಸೂರ್ಯಕಿರಣ ವಿಮಾನ ಹಾಗೂ ಇನ್ನೊಂದು ತರಬೇತಿ ವಿಮಾನ ಇಂದು ಬೆಳಗ್ಗೆ ಸಾಹಸ ಪ್ರದರ್ಶನ ಆರಂಭಿಸಿದವು. ಕೆಳಹಂತದಲ್ಲಿ ಸಂಚರಿಸುತ್ತಿದ್ದ ವಿಮಾನಗಳ ರೆಕ್ಕೆಗಳು ಒಂದಕ್ಕೊಂದು ಬಡಿದುಕೊಂಡವು. ಆಗ ಒಂದು ವಿಮಾನ ತಕ್ಷಣವೇ ನೆಲಕ್ಕಪ್ಪಳಿಸಿದ್ದರಿಂದ ಚಾಲಕ ಮೃತಪಟ್ಟರು. ನೆಲಕ್ಕುರುಳಿದ ವಿಮಾನ ಭಾಗಶಃ ಬೆಂಕಿಗೆ ಆಹುತಿಯಾಗಿದೆ. ಘಟನೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ವೈಮಾನಿಕ ಕ್ಷೇತ್ರದ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿಯನ್ನು ಕಮಠಾಣದಿಂದ ನಿರೀಕ್ಷಿಸಲಾಗಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications