ಗಣಿ ಗದ್ದಲ ಸದನದಲ್ಲಿ ಕೋಲಾಹಲ

ಅಧಿವೇಶನ ಆರಂಭವಾಗುತ್ತಿದ್ದಂತೆಯೇ ಪ್ರಶ್ನೆಗಳ ಸುರಿಮಳೆ ಸುರಿಸಿದ ಕಾಂಗ್ರೆಸ್ ನಾಯಕ ಟಿ ಬಿ ಜಯಚಂದ್ರ ಅಕ್ರಮ ಗಣಿಗಾರಿಕೆಗೆ ಕುರಿತು ಸರ್ಕಾರ ಮೃದುಧೋರಣೆ ತಾಳಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನೂರಾರು ಕೋಟಿ ರುಪಾಯಿಗಳ ಮೌಲ್ಯದ ಅಪಾರ ನೈಸರ್ಗಿಕ ಸಂಪತ್ತನ್ನು ಕೆಲವರು ಕೊಳ್ಳೆ ಹೊಡಯುತ್ತಿದ್ದಾರೆ. ಕಣ್ಣೆದುರಿಗೆ ಅನೇಕ ಅವ್ಯವಹಾರ ನಡೆದರೂ ಸರ್ಕಾರ ತಡೆಯಲು ಮನಸ್ಸು ಮಾಡುತ್ತಿಲ್ಲ. ಇದಕ್ಕೆ ಧ್ವನಿಗೂಡಿಸಿದ ಜೆಡಿಎಸ್ ಕೂಡ ಗಣಿಗಾರಿಕೆಗೆ ಕುರಿತು ತೀವ್ರ ಅಸಮಾಧಾನ ವ್ಯಕ್ತವಾಯಿತು.
ಅಷ್ಟಕ್ಕೆ ನಿಲ್ಲದ ಕಾಂಗ್ರೆಸ್ ಪಕ್ಷದ ವಾಗ್ಧಾಳಿ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಸರ್ಕಾರದಿಂದ ಸ್ಪಷ್ಟ ಉತ್ತರಬೇಕು ಪಟ್ಟು ಹಿಡಿಯಿತು. ಸರ್ಕಾರ ಈ ಬಗ್ಗೆ ಸೂಕ್ತ ಉತ್ತರ ನೀಡುವುದರಲ್ಲಿ ವಿಫಲವಾಗಿದ್ದರಿಂದ ಪ್ರತಿಪಕ್ಷಗಳು ಶಾಸಕರು ಬಾವಿಗಿಳಿದು ಪ್ರತಿಭಟನೆ ಆರಂಭಿಸಿದರು. ಇದರಿಂದ ಸದನದಲ್ಲಿ ತೀವ್ರ ಕೋಲಾಹಲ ಉಂಟಾಯಿತು.
ಈ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿದ ಸ್ಪೀಕರ್ ಜಗದೀಶ್ ಶೆಟ್ಟರ್ ಚರ್ಚೆ ನಡೆಯಲು ಅನುವು ಮಾಡಿಕೊಡಬೇಕೆಂದು ಪ್ರತಿಪಕ್ಷಗಳ ಮುಖಂಡರಲ್ಲಿ ಮನವಿ ಮಾಡಿಕೊಂಡರು. ಆಗ ಕಾಂಗ್ರೆಸ್ ಪಕ್ಷದ ನಾಯಕ ಟಿ ಬಿ ಜಯಚಂದ್ರ ಲೋಕಾಯುಕ್ತರು ನೀಡಿರುವ ಅಕ್ರಮ ಗಣಿಗಾರಿಕೆ ವರದಿಯನ್ನು ಸಿಬಿಐ ತನಿಖೆಗೆ ವಹಿಸಬೇಕು ಮತ್ತೊಂದು ಸಾರಿ ಒಕ್ಕೂರಲಿನ ಆಗ್ರಹ ವ್ಯಕ್ತವಾಯಿತು.
(ದಟ್ಸ್ ಕನ್ನಡ ವಾರ್ತೆ)
ಅನಿತಾ ಎಚ್ಡಿಕೆ, ಕಲ್ಪನಾ ಪ್ರಮಾಣ ವಚನ ಸ್ವೀಕಾರ












Click it and Unblock the Notifications